Darshan Thoogudeepa: ರೇಣುಕಾಸ್ವಾಮಿ ಮೇಲಿನ ಹಲ್ಲೆಯ ದೃಶ್ಯ ಸಿಸಿಟಿವಿ, ಮೊಬೈಲ್ ನಲ್ಲಿ ರೆಕಾರ್ಡ್!

Renukaswamy murder case: ರೇಣುಕಾಸ್ವಾಮಿ ಮೇಲಿನ ಹಲ್ಲೆಯ ವಿಡಿಯೋ ನೋಡಿ  ಸಿದ್ದರಾಮಯ್ಯ ಶಾಕ್, ಆರೋಪಿಗಳನ್ನು ಒದ್ದು ಒಳಗೆ ಹಾಕಿ ಎಂದ್ರು ಸಿಎಂ, 13 ವರ್ಷದ ಬಳಿಕ ಕಂಬಿ ಹಿಂದೆ ಸೇರಿದ ದರ್ಶನ್. 14 ದಿನ ದಾಸನಿಗೆ ಜೈಲೇ ಗತಿ.  

Written by - Savita M B | Last Updated : Jun 22, 2024, 09:23 PM IST
  • ದರ್ಶನ್ ಅಂಡ್ ಗ್ಯಾಂಗ್ ನಿಂದ ರೇಣುಕಾಸ್ವಾಮಿ ಕೊಲೆ ಆರೋಪ ಪ್ರಕರಣದಲ್ಲಿ ಪೊಲೀಸ್‌ಗೆ ಮಹತ್ವದ ಸಾಕ್ಷಿ ಸಿಕ್ಕಿದೆ.
  • ಆರೋಪಿಯೊಬ್ಬನಿಂದ ಮೊಬೈಲ್ ನಲ್ಲಿ ಚಿತ್ರೀಕರಣ ಮಾಡಲಾಗಿದೆ.
Darshan Thoogudeepa: ರೇಣುಕಾಸ್ವಾಮಿ ಮೇಲಿನ ಹಲ್ಲೆಯ ದೃಶ್ಯ ಸಿಸಿಟಿವಿ, ಮೊಬೈಲ್ ನಲ್ಲಿ ರೆಕಾರ್ಡ್! title=

Darshan Thoogudeepa: ದರ್ಶನ್ ಅಂಡ್ ಗ್ಯಾಂಗ್ ನಿಂದ ರೇಣುಕಾಸ್ವಾಮಿ ಕೊಲೆ ಆರೋಪ ಪ್ರಕರಣದಲ್ಲಿ ಪೊಲೀಸ್ರಿಗೆ ಮಹತ್ವದ ಸಾಕ್ಷಿ ಸಿಕ್ಕಿದೆ. ಕೊಲೆ ಕೇಸಲ್ಲಿ ದರ್ಶನ್ ಗೆ ಬಿಗಿಯಾಗೇ ಲಾಕ್ ಮಾಡಿರುವ ಪೊಲೀಸರಿಗೆ  ಒಂದಲ್ಲ, ಎರಡು ಹಲ್ಲೆ ಮಾಡಿರೋ ವಿಡಿಯೋಗಳನ್ನ ಕಲೆಕ್ಟ್ ಮಾಡಿದ್ದಾರೆ.  ಮೊದಲಿಗೆ ಶೆಡ್ ಗೆ ರೇಣುಕಾಸ್ವಾಮಿಯನ್ನ ಕರೆದುಕೊಂಡು ಹೋದಾಗ ದರ್ಶನ್ ಗ್ಯಾಂಗ್ ನಿಂದ ಮನಸೋ ಇಚ್ಚೆ ಹಲ್ಲೆ  ನಡೆಸಿದ್ದಾರೆ. ಈ ವೇಳೆ ರೇಣುಕಾಸ್ವಾಮಿಯ ಮೇಲಿನ ಹಲ್ಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇನ್ನು ಕಬ್ಬಿಣದ ರಾಡ್ , ಲಾಠಿ ಹಾಗು ಬೆಲ್ಟ್ ನಲ್ಲಿ ಕೂಡ ಹಲ್ಲೆ  ನಡೆಸುವಾಗ ಆರೋಪಿಯೊಬ್ಬನಿಂದ ಮೊಬೈಲ್ ನಲ್ಲಿ ಚಿತ್ರೀಕರಣ ಮಾಡಲಾಗಿದೆ.

ಇನ್ನೂ ಸಿಸಿಟಿವಿ ಡಿವಿಆರ್ ಸೀಜ್ ಮಾಡಿದ್ದು, ಚಿತ್ರೀಕರಣ ಮಾಡಿದ್ದ ಮೊಬೈಲ್ ಸಹ ಸೀಜ್ ಮಾಡಲಾಗಿದೆ. ಇದೇ ವಿಡಿಯೋಗಳನ್ನ  ಕಮಿಷನರ್ ಮುಖ್ಯಮಂತ್ರಿಗಳಿಗೆ ತೋರಿಸಿದ್ದಾರೆ ಎಂದು ಹೇಳಲಾಗ್ತಿದೆ. ಇನ್ನೂ ಈ ವಿಡಿಯೋ ನೋಡಿದ ಸಿಎಂ ಕೂಡ ಮರುಗಿದ್ದು ಇವನೇನು ಮನುಷ್ಯನೇನ್ರಿ ಈ ರೀತಿ ಹೊಡೆದಿದ್ದಾನೆ. ಈ ಕೇಸ್ ನಲ್ಲಿ ಯಾರನ್ನು ಬಿಡಬೇಡಿ ಎಲ್ಲರನ್ನು ಒದ್ದು ಒಳಗೆ ಹಾಕಿ ಅಂತ ಖುದ್ದು  ಸೂಚಿಸಿದ್ದಾರೆ . ಇದರಿಂದಾಗಿಯೇ ಪೊಲೀಸ್ರು ದರ್ಶನ್ ಅಂಡ್ ಟೀಮ್ ನ ಬಂಧಿಸಿದ್ದಾರೆ ಅಂತ ಹೇಳಲಾಗ್ತಿದೆ.

ಇನ್ನೂ ಇವತ್ತು ದರ್ಶನ್ ಸೇರಿ ನಾಲ್ವರು ಆರೋಪಿಗಳ ಪೊಲೀಸ್ ಕಸ್ಟಡಿ ಅಂತ್ಯವಾಯಿತು. ಹೀಗಾಗಿ ಕೋರ್ಟ್ ಗೆ ಹಾಜರುಪಡಿಸುವ ಮೊದಲು ಇಂದು ಸ್ಟೇಷನ್ ನಲ್ಲೇ ಮಲ್ಲತ್ತಹಳ್ಳಿಯ  ಸರ್ಕಾರಿ ವೈದ್ಯರು ಬಂದು ಆರೋಗ್ಯ ತಪಾಸಣೆ ನಡೆಸಿದ್ರು. ನಂತರ ನೇರವಾಗಿ ಆರೋಪಿಗಳನ್ನು ಕೋರ್ಟ್ ಗೆ ಕರೆತರಲಾಯಿತು.

ವಿಚಾರಣೆ ಮುಗಿದ ಕಾರಣ ಪೊಲೀಸರು ಆರೋಪಿಗಳನ್ನು ಕಸ್ಟಡಿಗೆ ಕೇಳುವ ಗೋಜಿಗೆ ಹೋಗಲಿಲ್ಲ. ಹೀಗಾಗಿ ದರ್ಶನ್, ಧನರಾಜ್, ವಿನಯ್, ಪ್ರದೋಶ್ ಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ವಿಧಿಲಾಯಿತು. ಹೀಗಾಗಿ 13 ವರ್ಷಗಳ ಬಳಿಕ ನಟ ದರ್ಶನ್ ಮತ್ತೆ ಜೈಲಲ್ಲಿ ಕಂಬಿ ಎಣಿಸುವ ಪರಿಸ್ಥಿತಿ ಎದುರಾಗಿದೆ. ಇನ್ನೂ ಕಳೆದ 6 ನೇ ತಾರೀಖಿನಂದೆ ಡಿ ಗ್ಯಾಂಗ್ ನ ಬೇರೆ ಬೇರೆ ಜೈಲಿಗೆ ಶಿಫ್ಟ್ ಮಾಡ್ತಾರೆ ಅಂತ ಜೀ ಕನ್ನಡ ನ್ಯೂಸ್ ಸುದ್ದಿ ಬಿತ್ತರಿಸಿತ್ತು. 

ಸದ್ಯ ಅದೇ ರೀತಿ ಪೊಲೀಸ್ರು ಕೋರ್ಟ್ ನಲ್ಲಿ ಆರೊಪಿಗಳನ್ನ ಬೇರೆ ಬೇರೆ ಜೈಲಿನಲ್ಲಿ ಇಡಲು ಕೋರ್ಟ್ ಗೆ ಮನವಿ‌ ಮಾಡಿದರು. ಆದರೆ  ‌ಕೋರ್ಟ್  ಈ ವಿಚಾರಣೆಯನ್ನ‌ ಕೋರ್ಟ್ ಸೋಮವಾರಕ್ಕೆ ಮುಂದೂಡಿದೆ. ಕೋರ್ಟ್ ಇದಕ್ಕೆ ಒಪ್ಪಿಗೆ ನೀಡಿದ್ರೆ ಡಿ ಗ್ಯಾಂಗ್ ಗುಂಪುಗಳಾಗಿ ಮಾಡಿ ಬೇರೆ ಬೇರೆ ಜೈಲಿಗಳುಗೆ ಶಿಫ್ಟ್ ಮಾಡಲು ತಯಾರು ನಡೆಸಿದ್ದಾರೆ. 

ಇದುವರೆಗೂ 17 ಜನ ಅರೆಸ್ಟ್ ಆಗಿದ್ದಾರೆ.  ಆರೋಪಿಗಳು ಒಂದೇ ಕಡೆ ಇದ್ರೆ ಪ್ರಕರಣದಿಂದ ಬಚಾವ್ ಆಗಲು ಒಂದಷ್ಟು ಪ್ಲಾನ್ ಮಾಡಬಹುದು. ಇಲ್ಲ ಅವರವರ ಮಧ್ಯೆ ಗಲಾಟೆಯಾಗೋ ಸಾಧ್ಯತೆಯಿದೆ ಈ ಹಿನ್ನೆಲೆ ಬೇರೆ ಬೇರೆ ಜೈಲಿಗೆ ಶಿಫ್ಟ್ ಮಾಡಲು ಪೊಲೀಸ್ರು ತೀರ್ಮಾನಿಸಿದ್ದಾರೆ.

ಇನ್ನೂ ಬೆಂಗಳೂರು ಕಾರಾಗೃಹಕ್ಕೆ ನಟ ದರ್ಶನ್ ಸೇರೋ ಹಿನ್ನೆಲೆ ಸುಮಾರು 30 ರೌಡಿಗಳನ್ನ  ಬೇರೆ ಬೇರೆ ಜೈಲಿಗೆ ಶಿಫ್ಟ್ ಮಾಡಲು ಕೂಡ ಜೈಲು ಅಧಿಕಾರಿಳು ಚಿಂತನೆ ನಡೆಸಿದ್ದಾರೆ. ಜೈಲಿನಲ್ಲಿ ದರ್ಶನ್ ಆಪ್ತರಾಗಿರೊ ಕೆಲ ರೌಡಿ ಶೀಟರ್ ಗಳು ಇದ್ದು ಅವರ ಜೊತೆಗೆ ಸಂಪರ್ಕ ತಪ್ಪಿಸಲು ಬೇರೆ ಜೈಲಿಗೆ ಶಿಫ್ಟ್ ಮಾಡಲು ಜೈಲು ಅಧಿಕಾರಿಗಳು ಚಿಂತನೆ ನಡೆಸಿದ್ದಾರಂತೆ.

 ಒಟ್ಟಿನಲ್ಲಿ ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿ ಕ್ರೂರವಾಗಿ ಹಲ್ಲೆ ಮಾಡಿ ಹತ್ಯೆ ಮಾಡಿರೋ ಡಿ ಗ್ಯಾಂಗ್ ಕನಿಷ್ಟ ಅಂದ್ರೂ ಒಂದೂವರೇ ವರ್ಷ ಹೊರಗೆ ಬರೋದು ಡೌಟು ಎನ್ನಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News