Lovely Star Prem: ಕಷ್ಟ ಕಾಲದ ಪತ್ನಿಯ ತ್ಯಾಗ ನೆನೆದ ಪ್ರೇಮ್!‌ ಲವ್ಲಿ ಕಥೆ ಎಂದ ಫ್ಯಾನ್ಸ್‌ ..

Weekend with Ramesh: ಈ ವಾರದ ವೀಕೆಂಡ್ ವಿತ್ ರಮೇಶ್​ ಕಾರ್ಯಕ್ರಮದಲ್ಲಿ ಲವ್ಲಿ ಸ್ಟಾರ್‌ ಪ್ರೇಮ್‌ ಆಗಮಿಸಿದ್ದರು.ಅವರೇ ಸ್ವತಃ ಕಾರ್ಯಕ್ರಮದಲ್ಲಿ ಜೀವನದ ನೋವು ನಲಿವು ಹೋರಾಟಗಳನ್ನು ಹಂಚಿಕೊಂಡಿದ್ದಾರೆ. 

Written by - Zee Kannada News Desk | Last Updated : May 8, 2023, 06:22 PM IST
  • ಈ ವಾರದ ವೀಕೆಂಡ್ ವಿತ್ ರಮೇಶ್​ ಕಾರ್ಯಕ್ರಮದಲ್ಲಿ ಲವ್ಲಿ ಸ್ಟಾರ್‌ ಪ್ರೇಮ್‌
  • ವಿಕೆಂಡ್‌ ವಿಥ್‌ ಕಾರ್ಯಕ್ರಮದಲ್ಲಿ ನೋವು ನಲಿವು ಹಂಚಿಕೊಂಡ ನಟ
  • ಆ ವೇಳೆ ಪತ್ನಿಯ ತ್ಯಾಗ ನೆನೆದ ನೇಕಾರ ಪ್ರೇಮ್‌
Lovely Star Prem: ಕಷ್ಟ ಕಾಲದ ಪತ್ನಿಯ ತ್ಯಾಗ ನೆನೆದ  ಪ್ರೇಮ್!‌ ಲವ್ಲಿ ಕಥೆ ಎಂದ ಫ್ಯಾನ್ಸ್‌ .. title=

ಬೆಂಗಳೂರು: ಈ ವಾರದ ವೀಕೆಂಡ್ ವಿತ್ ರಮೇಶ್​ ಕಾರ್ಯಕ್ರಮದಲ್ಲಿ ಲವ್ಲಿ ಸ್ಟಾರ್‌ ಪ್ರೇಮ್‌ ಆಗಮಿಸಿದ್ದರು. ನಟ ಪ್ರೇಮ್‌ ಇಂದು ಖ್ಯಾತಿ ಪಡೆದಿದ್ದರೂ ಆ ಖ್ಯಾತಿ ಹಿಂದೆ ನೂರಾರು ನೋವು ಕಷ್ಟ ಇದೆ ಅವರ  ವಿಕೆಂಡ್‌ ವಿಥ್‌ ಕಾರ್ಯಕ್ರಮದ ಮೂಲಕ ತಿಳಿದಿದೆ.

ಮೂವರು ತಂಗಿಯಂದಿರನ್ನು ಸಾಕಿ, ಉತ್ತಮ ವಿದ್ಯಾಭ್ಯಾಸದ ಜೊತೆಗೆ ಅವರನ್ನು ಒಳ್ಳೆಯ ಸಂಬಂಧಕ್ಕೆ ತಲುಪಿಸುವ ಜವಾಬ್ದಾರಿ ಹೊತ್ತಿದ್ದರು. ಅವರೇ ಸ್ವತಃ ಕಾರ್ಯಕ್ರಮದಲ್ಲಿ ಜೀವನದ ನೋವು ನಲಿವು ಹೋರಾಟಗಳನ್ನು ಹಂಚಿಕೊಂಡಿದ್ದಾರೆ. 

ಇದನ್ನೂ ಓದಿ: Kabzaa Actress Shriya: ಶಿಲುಬೆ ಧರಿಸಿದ ಕಬ್ಜ ಬೆಡಗಿ ಶ್ರಿಯಾ ಶರಣ್:  ನೆಟ್ಟಿಗರಿಂದ ಸಖತ್‌ ಟ್ರೋಲ್‌ !

ತನ್ನ ಪಾಲಿಗಿದ್ದ ಸಣ್ಣ  ಉದ್ಯಮವನ್ನು ಕಳೆದುಕೊಂಡು ತುಂಬಾ ಕಷ್ಟ ಪಡಬೇಕಾಗಿತ್ತು.  ಹಾಗಿರುವಾಗ ಯಾರೋ ಗೆಳೆಯನ ಸಹಾಯದಿಂದ ಧಾರಾವಾಹಿಯಲ್ಲಿ 300 ದಿನಗೂಲಿಯ ಎಕ್ಸ್​ಟ್ರಾ ಆಗಿ ನಟಿಸಲು ಹೋದವರಿಗೆ ಮನ್ವಂತರ ಧಾರಾವಾಹಿಯಲ್ಲಿ ನಟನ ಗೆಳೆಯನಾಗಿ  ಪಾತ್ರ ಒದಗಿ ಬಂದಿತ್ತು.

ಟಿ.ಎನ್.ಸೀತಾರಾಮ್ ಅವರು ನೀಡಿದ ಅವಕಾಶವನ್ನು ಕಾರ್ಯಕ್ರಮದಲ್ಲಿ ಹಂಚಿಕೊಂಡರು. ನಟ ಪ್ರೇಮ್ ಅವರ ಕುಲಕಸುಬು ನೇಕಾರಿಕೆ. ಚಿಕ್ಕವಯಸ್ಸಿನಿಂದ ನೇಕಾರಿಕೆ ಮಾಡಿಕೊಂಡು ಬಂದಿದ್ದ ಪ್ರೇಮ್ ಆನಂತರ ಕಿರುತೆರೆಯಲ್ಲಿ ಜ್ಯೂನಿಯರ್ ಆರ್ಟಿಸ್ಟ್ ಆದರು. ಧಾರಾವಾಹಿಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿದ್ದ ನಟ ‘ಪ್ರಾಣ’ ಚಿತ್ರದ ಮೂಲಕ  ಪ್ರೇಮ್ ಚಿತ್ರರಂಗಕ್ಕೆ ಹೀರೋ ಆಗಿ ಬಂದರು. 

ಇದನ್ನೂ ಓದಿ: Rocking Star  Yash: ಏನಿದು ರಾಕಿ ಭಾಯ್‌ ಯಶ್ ಹೊಸ ಗೆಟಪ್‌ ! ರಾಕಿಂಗ್ ಸ್ಟಾರ್ ಮುಂದಿನ ಸಿನಿಮಾ ಯಾವುದು? ಇಲ್ಲಿದೆ ನೋಡಿ ವಿವರ..

ಇವರ ಜೀವನದಲ್ಲಿ ಏಳಿಗೆಯಲ್ಲಿ ಗೆಳೆಯರ ಪಾತ್ರ ಎಷ್ಟು ಇದಿಯೋ ಅವರ ಇವರ ಮಡದಿಯಾದ ಜ್ಯೋತಿಯವರ ಪಾತ್ರವು ಅಷ್ಟೇ  ಮುಖ್ಯವಾಗಿದೆ. ಕಾರಣ ನಟ ಪ್ರೇಮ್‌  ಜೀವನದ ಸೋತು ಕುಗ್ಗಿದಾಗ , ಪತ್ನಿಯರು ಸಹಾಯ ಅಥವಾ ನೆರವಾಗುವುದು ಸಹಜ ಆದ್ರೆ ಇವರ ಪತ್ನಿ ಪ್ರೇಮ್‌ ಕಷ್ಟದಲ್ಲಿ ತಮ್ಮ ತಾಳಿಯನ್ನು ಅಡ ಇಟ್ಟು ಪತಿಯ ಕಷ್ಟಕ್ಕೆ ನೆರೆವಾಗಿದ್ದರಂತೆ.! ಆದಾಗ್ಯೂ ಅವರ ಪತ್ನಿ ಸರಳತೆ ಪಾಲಿಸುತ್ತಾಳೆಂದು ಹೇಳಿಕೊಂಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News