'ವಂದೇ ಮಾತರಂ' ಬದಲು 'ಜನ ಗಣ ಮನ' ಹಾಡಿ: ಬಿಜೆಪಿ ನಿರ್ಧಾರವನ್ನು ಹಿಮ್ಮೆಟ್ಟಿಸಿದ ಬಿಎಸ್ಪಿ ಮೇಯರ್

         

Last Updated : Dec 7, 2017, 01:27 PM IST
'ವಂದೇ ಮಾತರಂ' ಬದಲು 'ಜನ ಗಣ ಮನ' ಹಾಡಿ: ಬಿಜೆಪಿ ನಿರ್ಧಾರವನ್ನು ಹಿಮ್ಮೆಟ್ಟಿಸಿದ ಬಿಎಸ್ಪಿ ಮೇಯರ್ title=

ಮೀರತ್: ಉತ್ತರ ಪ್ರದೇಶದಲ್ಲಿ ಹೊಸದಾಗಿ ಚುನಾಯಿತರಾದ ಮೇಯರ್ 'ವಂದೇ ಮಾತರಂ' ಬಗೆಗೆ ಅವರ ನಿರ್ಧಾರವನ್ನು ವ್ಯತಿರಿಕ್ತಗೊಳಿಸಿದ್ದಾರೆ. ಇತ್ತೀಚೆಗೆ ನಡೆದ ಯುಪಿ ಸ್ಥಳೀಯ ಚುನಾವಣೆಯಲ್ಲಿ ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಟಿಕೆಟ್ನಲ್ಲಿ ಮೀರತ್ ಮೇಯರ್ ಆಗಿ ಆಯ್ಕೆಯಾದ ಸುನೀತಾ ವರ್ಮಾ ಅವರು ಎಲ್ಲಾ ಬೋರ್ಡ್ ಸಭೆಗಳಲ್ಲಿ 'ವಂದೇ ಮಾತರಂ' ಕಡ್ಡಾಯವಾಗಿ ಹಾಡುವ ನೀತಿಯನ್ನು ಹಿಮ್ಮೆಟ್ಟಿಸುತ್ತಿದ್ದಾರೆ.

ಮೀರತ್ ಮುನಿಸಿಪಲ್ ಕಾರ್ಪೋರೇಶನ್ನ ಸಭೆಗಳ ಮುಂಚೆ ಸದಸ್ಯರು ವಂದೇ ಮಾತರಂ ಅನ್ನು ಹಾಡಲು ಕಡ್ಡಾಯ ಮಾಡಿದ್ದ ಅವರ ಹಿಂದಿನ ಹಿರಿಯಕಂತ್ ಅಹ್ಲುವಾಲಿಯಾ ಅವರು ಬಿಜೆಪಿಯ ಸದಸ್ಯರಾಗಿದ್ದರು. ಕೆಲವು ಸಭೆಗಳಲ್ಲಿ ರಾಷ್ಟ್ರೀಯ ಹಾಡನ್ನು ಹಾಡದ ಕೆಲವು ಸದಸ್ಯರನ್ನು ಆತ ಬೆದರಿಕೆ ಹಾಕಿದ್ದಾನೆಂದು ವರದಿಯಾಗಿದೆ.

ವರ್ಮಾ ಈಗ ತಾಜಾ ಆದೇಶ ನೀಡಿದ್ದು, ವಂದೇ ಮಾತರಂ ಬದಲಿಗೆ ಜನ ಗಣ ಮನ ವನ್ನು ಎಲ್ಲಾ ಸದಸ್ಯರು ಹಾಡಬೇಕೆಂದು, ತನ್ನ ನಿರ್ಧಾರವನ್ನು ಅನುಮೋದಿಸಲು ಪೌರಸಭೆಯ ಮಂಡಳಿಯ ಸಂವಿಧಾನವನ್ನು ಅವರು ಉಲ್ಲೇಖಿಸಿದ್ದಾರೆ. 

ಅದೇ ಹೊತ್ತಿಗೆ ಬಿಜೆಪಿ ಈ ನಿರ್ಧಾರವನ್ನು ಪ್ರತಿಭಟಿಸಿದೆ. ಮುನ್ಸಿಪಲ್ ಕಾರ್ಪೋರೇಷನ್ ಒಳಗೆ ಮತ್ತು ಹೊರಗಡೆ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ. ಈ ನಿರ್ಧಾರಕ್ಕೆ ಪ್ರತಿಭಟನೆಯ ಭಾಗವಾಗಿ ರಸ್ತೆಗಳಲ್ಲಿ ವಂದೇ ಮಾತರಂ ಹಾಡಲು ಅವರು ಯೋಜಿಸುತ್ತಿದ್ದಾರೆ.

ಯುಪಿ ಸ್ಥಳೀಯ ಚುನಾವಣೆಗಳಲ್ಲಿ ಹೆಚ್ಚಿನ ಸ್ಥಳಗಳಲ್ಲಿ ಬಿಜೆಪಿ ವಿಜಯಶಾಲಿಯಾಗಿದ್ದರೂ, ಬಿಎಸ್ಪಿ ಅಭ್ಯರ್ಥಿ ಮೀರತ್ನಲ್ಲಿ ಪಕ್ಷದಿಂದ ಸ್ಥಾನ ಪಡೆದುಕೊಂಡಿದ್ದಾರೆ. ಸುನೀತಾ ವರ್ಮಾ ಬಿಜೆಪಿ ಅಭ್ಯರ್ಥಿ ಕಾಂತಾ ಕಾರ್ಡಮ್ ಅವರನ್ನು 29,000 ಮತಗಳಿಂದ ಸೋಲಿಸಿದರು.

ಮೀರತ್ ಮೇಯರ್ ಮಾಜಿ ಬಿಎಸ್ಪಿ ಎಂಎಲ್ಎ ಯೋಗೇಶ್ ವರ್ಮಾ ಅವರ ಪತ್ನಿ.

Trending News