ಈ ಎಲೆ ಜಗಿದರೆ ಸಾಕು ಬ್ಲಡ್‌ ಶುಗರ್‌ ಕೂಡಲೇ ಕಂಟ್ರೋಲ್‌ ಆಗುತ್ತೆ!

Diabetes Control With Curry Leaves: ಇಂದು ಮನುಕುಲವನ್ನು ಬಾಧಿಸುವ ಸಾಮಾನ್ಯ ಕಾಯಿಲೆಗಳಲ್ಲಿ ಮಧುಮೇಹವೂ ಒಂದು. ಈ ರೋಗವು ದೇಹದಲ್ಲಿನ ಅಧಿಕ ರಕ್ತದ ಸಕ್ಕರೆಯಿಂದ ಉಂಟಾಗುತ್ತದೆ.

Written by - Chetana Devarmani | Last Updated : Aug 11, 2024, 11:04 AM IST
  • ಅಧಿಕ ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸಲು ಮನೆಮದ್ದು
  • ಮಧುಮೇಹ ನಿಯಂತ್ರಿಸಲು ಕರಿಬೇವಿನ ಎಲೆ
  • ಕರಿಬೇವಿನ ಎಲೆಗಳು ವಿವಿಧ ಆರೋಗ್ಯ ಪ್ರಯೋಜನ
ಈ ಎಲೆ ಜಗಿದರೆ ಸಾಕು ಬ್ಲಡ್‌ ಶುಗರ್‌ ಕೂಡಲೇ ಕಂಟ್ರೋಲ್‌ ಆಗುತ್ತೆ! title=

Diabetes Control With Curry Leaves: ಒಮ್ಮೆ ಮಧುಮೇಹ ಬಂದರೆ ಅದನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ. ಕೆಲವು ಅಭ್ಯಾಸಗಳನ್ನು ಅನುಸರಿಸಿ ಇದನ್ನು ನಿಯಂತ್ರಣದಲ್ಲಿ ಇರಿಸಬಹುದು. ದಿನನಿತ್ಯ ಸೇವಿಸುವ ಕೆಲವೇ ಆಹಾರಗಳಿಂದ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. 

ಕರಿಬೇವಿನ ಎಲೆಗಳನ್ನು ನಮ್ಮ ಅಡುಗೆಯಲ್ಲಿ ಬಹುತೇಕ ಎಲ್ಲಾ ಭಕ್ಷ್ಯಗಳಲ್ಲಿ ಬಳಸುತ್ತೇವೆ. ಆಹಾರಕ್ಕೆ ವಿಶಿಷ್ಟವಾದ ಸುವಾಸನೆ ಮತ್ತು ಪರಿಮಳವನ್ನು ಸೇರಿಸುವುದರ ಜೊತೆಗೆ, ಕರಿಬೇವಿನ ಎಲೆಗಳು ವಿವಿಧ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ. ಇದು ಅತ್ಯುತ್ತಮ ಮಸಾಲೆ ಎಂದು ಪರಿಗಣಿಸಲಾಗಿದೆ. 

ಆಯುರ್ವೇದದಲ್ಲಿ ಕ್ಯಾಲ್ಸಿಯಂ ಭರಿತ ಕರಿಬೇವಿನ ಎಲೆಗಳಿಗೂ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಇದು ಹೃದಯ ಸಂಬಂಧಿ ಕಾಯಿಲೆಗಳು, ಸೋಂಕುಗಳು ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆಂಟಿಆಕ್ಸಿಡೆಂಟ್‌ಗಳಾದ ಬೀಟಾ-ಕ್ಯಾರೋಟಿನ್ ಮತ್ತು ವಿಟಮಿನ್ ಸಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದರೊಂದಿಗೆ ಮಧುಮೇಹವನ್ನು ನಿಯಂತ್ರಣದಲ್ಲಿಡಲು ಇದು ಸಹಕಾರಿಯಾಗಿದೆ. ಮಧುಮೇಹಿಗಳು ಇದನ್ನು ಪ್ರತಿದಿನ ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯವಾಗುತ್ತದೆ.

ಇದನ್ನೂ ಓದಿ: ಹೆಚ್ಚು ನೀರು ಕುಡಿದರೆ ವಿಷವಾಗಬಹುದೇ? ಇಲ್ಲಿದೆ ನೀರಿನ ವಿಷದ ಬಗ್ಗೆ ಅಚ್ಚರಿಯ ಮಾಹಿತಿ 

ಕರಿಬೇವಿನ ಎಲೆಗಳಲ್ಲಿರುವ ಅಂಶಗಳು ಇನ್ಸುಲಿನ್ ಕ್ರಿಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರ ಹೈಪರ್ಗ್ಲೈಸೆಮಿಕ್ ವಿರೋಧಿ ಗುಣಲಕ್ಷಣಗಳಿಂದಾಗಿ, ಇದು ಮಧುಮೇಹ ರೋಗಿಗಳಿಗೆ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ.

ಕರಿಬೇವಿನ ಎಲೆಯಲ್ಲಿ ನಾರಿನಂಶ ಅಧಿಕವಾಗಿದೆ. ಫೈಬರ್ ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಚಯಾಪಚಯವನ್ನು ಸುಧಾರಿಸಲು ಸಹ ಸಹಾಯ ಮಾಡುತ್ತದೆ. ಇದು ನಿಮ್ಮ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡುತ್ತದೆ. 

ಮಧುಮೇಹ ನಿಯಂತ್ರಣಕ್ಕೆ ಕರಿಬೇವಿನ ಎಲೆಗಳನ್ನು ತಿನ್ನುವುದು ಹೇಗೆ?

- ಕರಿಬೇವಿನ ಎಲೆಗಳನ್ನು ಪುಡಿ ಮಾಡಿ ಅಥವಾ ಪೇಸ್ಟ್ ಮಾಡಿ ಮತ್ತು ಅನ್ನದೊಂದಿಗೆ ಬೆರೆಸಿ, ತಿನ್ನಬಹುದು.
- ಕರಿಬೇವಿನ ಎಲೆಗಳನ್ನುಪುಡಿಮಾಡಿ ಮತ್ತು ನೀರಿನಲ್ಲಿ ಮಿಶ್ರಣ ಮಾಡಿ ಮತ್ತು ಈ ಕರಿಬೇವಿನ ಎಲೆಗಳ ನೀರನ್ನು ಕುಡಿಯಬಹುದು.
- ಕರಿಬೇವಿನ ಸೊಪ್ಪನ್ನು ಹಸಿಯಾಗಿ ರುಬ್ಬಿ ಮಜ್ಜಿಗೆಯೊಂದಿಗೆ ಬೆರೆಸಿ ಕುಡಿಯಬಹುದು.
- ಬೆಳಗ್ಗೆ ಎದ್ದ ನಂತರ ಇದರ ಎಲೆಗಳನ್ನು ದಿನಕ್ಕೆ 8-10 ಬಾರಿ ಅಗಿಯಿರಿ.
- ಇದನ್ನು ಎಲ್ಲಾ ರೀತಿಯ ಆಹಾರಗಳಲ್ಲಿ ಅಡುಗೆ ಮಾಡುವಾಗ ಸೇರಿಸಬಹುದು.

ಇದನ್ನೂ ಓದಿ: ನೀವು ಈ ರೋಗಲಕ್ಷಣಗಳನ್ನು ಹೊಂದಿದ್ದೀರಾ? ಲಿವರ್ ಡಿಸಾರ್ಡರ್ ಇರಬಹುದು... ಹುಷಾರಾಗಿರಿ!!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News