BBK 11ರ 3ನೇ ಸ್ಪರ್ಧಿ ʼಹಿಂದೂ ಫೈರ್‌ ಬ್ರಾಂಡ್‌ʼ ಚೈತ್ರಾ ಕುಂದಾಪುರ..! ಇವರ ಹಿನ್ನಲೆ ಗೊತ್ತಾದ್ರೆ ಶಾಕ್‌ ಆಗ್ತೀರಾ..!!

Chaithra Kundapura in Bigg Boss 11 : ಬಿಗ್‌ ಬಾಸ್‌ ಕನ್ನಡ ಸೀಸನ್ 11ರ ಸ್ಪರ್ಧಿಗಳ ಹೆಸರು ಒಂದೊಂದಾಗಿ ರಿವೀಲ್‌ ಆಗುತ್ತಿದೆ. ಈಗಾಗಲೇ ಇಬ್ಬರು ಕಲರ್‌ ಕನ್ನಡ ವಾಹಿನಿ ಇಬ್ಬರು ಸ್ಪರ್ಧಿಗಳ ಹೆಸರನ್ನು ಬಹಿರಂಗಗೊಳಿಸಿದೆ.. ಈ ಪೈಕಿ ಇದೀಗ 3ನೇ ಸ್ಪರ್ಧಿಯಾಗಿ ಭಾಷಣಗಾರ್ತಿ, ಹಿಂದೂ ಫೈರ್‌ ಬ್ರಾಂಡ್‌ ಚೈತ್ರಾ ಕುಂದಾಪುರ ಆಯ್ಕೆಯಾಗಿದ್ದಾರೆ..

Written by - Krishna N K | Last Updated : Sep 28, 2024, 09:52 PM IST
    • ಬಿಗ್‌ ಬಾಸ್‌ ಕನ್ನಡ ಸೀಸನ್ 11ರ ಸ್ಪರ್ಧಿಗಳ ಹೆಸರು ಒಂದೊಂದಾಗಿ ರಿವೀಲ್‌ ಆಗುತ್ತಿದೆ.
    • ಈಗಾಗಲೇ ಇಬ್ಬರು ಕಲರ್‌ ಕನ್ನಡ ವಾಹಿನಿ ಇಬ್ಬರು ಸ್ಪರ್ಧಿಗಳ ಹೆಸರನ್ನು ಬಹಿರಂಗಗೊಳಿಸಿದೆ..
    • ಇದೀಗ 3ನೇ ಸ್ಪರ್ಧಿಯಾಗಿ ಭಾಷಣಗಾರ್ತಿ, ಹಿಂದೂ ಫೈರ್‌ ಬ್ರಾಂಡ್‌ ಚೈತ್ರಾ ಆಯ್ಕೆಯಾಗಿದ್ದಾರೆ..
BBK 11ರ 3ನೇ ಸ್ಪರ್ಧಿ ʼಹಿಂದೂ ಫೈರ್‌ ಬ್ರಾಂಡ್‌ʼ ಚೈತ್ರಾ ಕುಂದಾಪುರ..! ಇವರ ಹಿನ್ನಲೆ ಗೊತ್ತಾದ್ರೆ ಶಾಕ್‌ ಆಗ್ತೀರಾ..!! title=
Bigg Boss Kannada 11

BBK 11 : ಬಿಗ್ ಬಾಸ್ ಕನ್ನಡ ಸೀಸನ್ 11 ರ ಗ್ರ್ಯಾಂಡ್‌ ಓಪನಿಂಗ್ ಇದೇ ಸೆಪ್ಟೆಂಬರ್ 29 ಅಂದ್ರೆ ನಾಳೆ ಭಾನುವಾರ ನಡೆಯಲಿದೆ. ಇದರ ನಡುವೆ ಕಲರ್‌ ಕನ್ನಡ ವಾಹಿನಿ ಬಿಗ್‌ ಬಾಸ್‌ ಸ್ಪರ್ಧಿಗಳ ಹೆಸರನ್ನು ರಿವೀಲ್‌ ಮಾಡುತ್ತಿದೆ.. ಈಗಾಗಲೇ ಕಿರುತೆರೆ ನಟಿ ಗೌತಮಿ ಚಾಧವ್‌ ಮತ್ತು ಲಾಯರ್‌ ಜಗದೀಶ್‌ ದೊಡ್ಮನೆ ಸೇರುವುದು ಫಿಕ್ಸ್‌ ಆಗಿದೆ..

ಈ ಹಿಂದೆ ಸೆಪ್ಟೆಂಬರ್ 28ರಂದು ಕೆಲವು ಸ್ಪರ್ಧಿಗಳ ಹೆಸರನ್ನು ರಿವೀಲ್ ಮಾಡುವುದಾಗಿ ಕಲರ್ಸ್ ಕನ್ನಡ ವಾಹಿನಿ ತಿಳಿಸಿತು. ಮೊದಲ ಸ್ಪರ್ಧಿಯಾಗಿ ಗೌತಮಿ ಜಾಧವ್‌ ಹೆಸರನ್ನು ಬಹಿರಂಗ ಗೊಳಿಸಲಾಗಿದೆ.. ಎರಡನೇ ಸ್ಪರ್ಧಿಯಾಗಿ ಲಾಯರ್‌ ಜಗದೀಶ್‌ ಆಯ್ಕೆಯಾಗಿದ್ದಾರೆ.. ಮೂರನೇ ಸ್ಪರ್ಧಿ ಚೈತ್ರಾ ಕುಂದಾಪುರ..

ಇದನ್ನೂ ಓದಿ: BBK 11 : ಬಿಗ್‌ ಬಾಸ್‌ 11ರ ಮನೆಗೆ ʼಹಿಂದೂ ಪರ ಫೈರ್‌ ಬ್ರಾಂಡ್‌ʼ ಎಂಟ್ರಿ..! ಸ್ಪರ್ಧಿಗಳಿಗೆ ನಡುಕ ಫಿಕ್ಸ್‌

ಕರಾವಳಿಯ ಫೈರ್ ಬ್ರಾಂಡ್, ಪ್ರಖರ ಭಾಷಣಗಾರ್ತಿ ಚೈತ್ರಾ ಕುಂದಾಪುರ ತಮ್ಮ ಭಾಷಣದ ಮೂಲಕ ರಾಜ್ಯದ ಜನರ ಗಮನಸೆಳೆದಿದ್ದಾರೆ. ಇವರ ಉದ್ಯೋಗ ಮತ್ತು ಶಿಕ್ಷಣ ಹಿನ್ನೆಲೆ ನೋಡುವುದಾದರೆ, ಉದಯವಾಣಿ ಪತ್ರಿಕೆಯಲ್ಲಿ ಉಪಸಂಪಾದಕಿಯಾಗಿಯೂ ಕೆಲ ಕಾಲ ಚೈತ್ರಾ ಅವರು ಕೆಲಸ ಮಾಡಿದ್ದಾರೆ.

ಅಲ್ಲದೆ, ಹಲವಾರು ವಿವಾದಗಳ ಮೂಲಕ ಸದಾ ಸುದ್ದಿಯಲ್ಲಿರುತ್ತಿದ್ದರು. ಹೆಚ್ಚಾಗಿ ತಮ್ಮ ಭಾಷಣಗಳ ಮೂಲಕ ಯುವ ಜನತೆಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದರು.. ಇವರ ಭಾಷಣಗಳ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ್ದವು.

ಇದನ್ನೂ ಓದಿ:ಈ ಬಾರಿ ಪಕ್ಕಾ ರೆಕಾರ್ಡ್‌ ಬ್ರೇಕ್!‌ ಬಿಗ್‌ಬಾಸ್‌ʼ ಮನೆಗೆ ಎಂಟ್ರಿ ಕೊಡಲಿದ್ದಾರೆ ʼಆʼ ಖ್ಯಾತ ವ್ಯಕ್ತಿ!! 

ಕುಂದಾಪುರದ ತೆಕ್ಕಟ್ಟೆಯಲ್ಲಿ ಪಿಯುಸಿವರೆಗೆ ವ್ಯಾಸಂಗ ಮಾಡಿದ ಚೈತ್ರಾ, ಕೊಣಾಜೆಯಲ್ಲಿ ಪದವಿ ಪೂರ್ಣಗೊಳಿದ್ದಾರೆ.. ಮಂಗಳೂರು ವಿಶ್ವ ವಿದ್ಯಾಲಯದಿಂದ ಪದವಿ ಪಡೆದಿದ್ದಾರೆ. ಸಮಯ ಸುದ್ದಿವಾಹಿನಿ, ಉಡುಪಿಯ ಸ್ಪಂದನ ಟಿವಿಯ ನಿರೂಪಕಿಯಾಗಿ.. ಮುಕ್ತ ನ್ಯೂಸ್ ಅನ್ನೋ ಸ್ಥಳೀಯ ಸುದ್ದಿ ವಾಹಿನಿಯಲ್ಲೂ ಕೆಲಸ ಮಾಡಿದ್ದಾರೆ.. ಸಧ್ಯ Bigg Boss Kannada Season 11 ರ ಸ್ಪರ್ಧಿಯಾಗಿ ದೊಡ್ಮನೆ ಪ್ರವೇಶ ಮಾಡಲಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News