ಜೀವನದಲ್ಲಿನ ಕೆಟ್ಟ ದಿನಗಳು ಆರಂಭದ ಮುನ್ಸೂಚನೆ ನೀಡುತ್ತವೆ ಈ ಘಟನೆಗಳು!

ಜೀವನ ಅಂದ ಮೇಲೆ ಒಳ್ಳೆಯ ಹಾಗೂ ಕೆಟ್ಟ ದಿನಗಳು ಎದುರಾಗುತ್ತಲೇ ಇರುತ್ತವೆ. ಆದರೆ, ನಮ್ಮ ಸುತ್ತಮುತ್ತಲು ನಡೆಯುವ ಕೆಲ ಘಟನಾವಳಿಗಳು ನಮಗೆ ಆ ಒಳ್ಳೆಯ ಹಾಗೂ ಕೆಟ್ಟ ಸಂಗತಿಗಳ ಮುನ್ಸೂಚನೆಯನ್ನು ನೀಡುತ್ತವೆ. ಆ ಘಟನೆಗಳು ಯಾವುವು ತಿಳಿದುಕೊಳ್ಳೋಣ ಬನ್ನಿ.  

Written by - Nitin Tabib | Last Updated : Jul 12, 2023, 10:27 PM IST
  • ನಿಮ್ಮ ಜೀವನದಲ್ಲಿಯೂ ಕೂಡ ಇಂತಹ ಮುನ್ಸೂಚನೆಗಳು ದೊರೆತರೆ ತಕ್ಷಣ ಎಚ್ಚೆತ್ತುಕೊಳ್ಳಿ ಮತ್ತು
  • ಮುಂದಾಗುವ ಭಾರಿ ನಷ್ಟದಿಂದ ಪಾರಾಗಿ. ಈ ಘಟನೆಗಳನ್ನು ಅಪ್ಪಿತಪ್ಪಿಯೂ ಕೂಡ ನಿರ್ಲಕ್ಷಿಸಬೇಡಿ.
  • ಇದ್ದಕ್ಕಿದ್ದಂತೆ ರಾತ್ರಿ ಎಚ್ಚರವಾಗುವುದು ಕೂಡ ಒಂದು ಶುಭ ಸಂಕೇತವಲ್ಲ. ವಾಸ್ತು ದೋಷ ಹೊಂದಿರುವ ಮನೆಯಲ್ಲಿನ ನಕಾರಾತ್ಮಕತೆಯ ಸಂಕೇತವಿದು.
ಜೀವನದಲ್ಲಿನ ಕೆಟ್ಟ ದಿನಗಳು ಆರಂಭದ ಮುನ್ಸೂಚನೆ ನೀಡುತ್ತವೆ ಈ ಘಟನೆಗಳು! title=

ಬೆಂಗಳೂರು:  ಜೀವನ ಅಂದ ಮೇಲೆ ಒಳ್ಳೆಯ ಹಾಗೂ ಕೆಟ್ಟ ದಿನಗಳು ಎದುರಾಗುತ್ತಲೇ ಇರುತ್ತವೆ. ಆದರೆ, ನಮ್ಮ ಸುತ್ತಮುತ್ತಲು ನಡೆಯುವ ಕೆಲ ಘಟನಾವಳಿಗಳು ನಮಗೆ ಆ ಒಳ್ಳೆಯ ಹಾಗೂ ಕೆಟ್ಟ ಸಂಗತಿಗಳ ಮುನ್ಸೂಚನೆಯನ್ನು ನೀಡುತ್ತವೆ. ನಿಮ್ಮ ಜೀವನದಲ್ಲಿಯೂ ಕೂಡ ಇಂತಹ ಮುನ್ಸೂಚನೆಗಳು ದೊರೆತರೆ ತಕ್ಷಣ ಎಚ್ಚೆತ್ತುಕೊಳ್ಳಿ ಮತ್ತು ಮುಂದಾಗುವ ಭಾರಿ ನಷ್ಟದಿಂದ ಪಾರಾಗಿ. ಈ ಘಟನೆಗಳನ್ನು ಅಪ್ಪಿತಪ್ಪಿಯೂ ಕೂಡ ನಿರ್ಲಕ್ಷಿಸಬೇಡಿ.

1, ಮನೆಯ ಮೇಲ್ಛಾವಣಿಯ ಮೇಲೆ ಸತ್ತ ಪಕ್ಷಿ ಕಾಣುವುದು ಒಂದು ಅಶುಭ ಸಂಕೇತ. ಇದರಿಂದ ಮನೆಯಲ್ಲಿರುವ ಮಕ್ಕಳಿಗೆ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. 

2. ಮನೆಯಂಗಳದಲ್ಲಿ ನೆಡಲಾದ ತುಳಸಿ ಇದ್ದಕ್ಕಿದ್ದಂತೆ ಒಣಗಿದರೆ ತಕ್ಷಣ ಎಚ್ಚೆತ್ತುಕೊಳ್ಳಿ. ಯಾವುದೋ ಒಂದು ದುರಾದೃಷ್ಟ ಭವಿಷ್ಯದಲ್ಲಿ ಕಾದಿದೆ ಎಂಬುದರ ಸಂಕೇತ ಅದು. ಅದರಲ್ಲಿಯೂ ವಿಶೇಷವಾಗಿ ಆರ್ಥಿಕ ಸಂಕಷ್ಟ ಎದುರಾಗುವ ಸಾಧ್ಯತೆ ಇರುತ್ತದೆ.

3. ಆಕಸ್ಮಿಕವಾಗಿ ನೆಲದ ಮೇಲೆ ಎಣ್ಣೆ ಅಥವಾ ಹಾಲು ಬೀಳುವುದು ಒಂದು ಅಶುಭ ಸಂಕೇತ. ವ್ಯಾಪಾರ ಹಾಗೂ ಉದ್ಯೋಗದಲ್ಲಿ ನಷ್ಟ ಉಂಟಾಗುವ ಸೂಚಕ ಅದು. ಇದರಂತೆಯೇ ಉಪ್ಪು ಬೀಳುವುದು ಕೂಡ ಒಂದು ಒಳ್ಳೆಯ ಸಂಕೇತವಲ್ಲ.

4. ಮನೆಯಲ್ಲಿನ ಗಡಿಯಾರ ಪದೇ ಪದೇ ನಿಂತುಹೋಗುತ್ತಿದ್ದರೆ, ಅದು ಒಳ್ಳೆಯ ಸಂಕೇತವೆಂದು ಪರಿಗಣಿಸಲಾಗುವುದಿಲ್ಲ. ಇದರಿಂದ ನಿಮ್ಮ ಅದೃಷ್ಟ ದುರಾದೃಷ್ಟವಾಗಿ  ತಿರುಗಲು ಸಮಯ ಬೇಕಾಗುವುದಿಲ್ಲ.

ಇದನ್ನೂ ಓದಿ-

5. ಇದ್ದಕ್ಕಿದ್ದಂತೆ ರಾತ್ರಿ ಎಚ್ಚರವಾಗುವುದು ಕೂಡ ಒಂದು ಶುಭ ಸಂಕೇತವಲ್ಲ. ವಾಸ್ತು ದೋಷ ಹೊಂದಿರುವ ಮನೆಯಲ್ಲಿನ ನಕಾರಾತ್ಮಕತೆಯ ಸಂಕೇತವಿದು.

ಇದನ್ನೂ ಓದಿ-

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ) 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News