Rajasthan vs PBKS, 4th Match: ಕೊನೆವರೆಗೂ ಹೋರಾಡಿ ಸೋತ ರಾಜಸ್ಥಾನ ರಾಯಲ್ಸ್

ಕೊನೆಯ ಎಸೆತದವರೆಗೂ ಕೂತುಹಲ ಕೆರಳಿಸಿದ್ದ ಪಂದ್ಯದಲ್ಲಿ ಕೊನೆಗೂ ವಿಜಯಲಕ್ಷ್ಮೀ ಪಂಜಾಬ್ ಕಿಂಗ್ಸ್ ತಂಡಕ್ಕೆ ಒಲಿದಿದ್ದಾಳೆ.

Last Updated : Apr 13, 2021, 12:43 AM IST
  • ಪಂದ್ಯವನ್ನು ಏಕಾಂಗಿಯಾಗಿ ಗೆಲುವಿನ ತುದಿಗೆ ತಂದಿರಿಸಿದ್ದ ಸಂಜು ಸ್ಯಾಮ್ಸನ್ ಕೊನೆಯ ಎಸೆತದಲ್ಲಿ ಆರ್ಶ್ದೀಪ್ ಗೆ ವಿಕೆಟ್ ಒಪ್ಪಿಸುವ ಮೂಲಕ ಗೆಲುವನ್ನು ಕೈಚೆಲ್ಲಿದರು.
  • ಕೇವಲ 63 ಎಸೆತಗಳಲ್ಲಿ 12 ಬೌಂಡರಿ ಹಾಗೂ 7 ಭರ್ಜರಿ ಸಿಕ್ಸರ್ ಗಳೊಂದಿಗೆ 119 ರನ್ ಗಳನ್ನು ಸಿಡಿಸಿ ಕೊನೆಯ ಓವರ್ ನಲ್ಲಿ ಸಿಕ್ಸರ್ ಸಿಡಿಸಲು ಹೋಗಿ ವಿಕೆಟ್ ಒಪ್ಪಿಸಿದರು.
Rajasthan vs PBKS, 4th Match: ಕೊನೆವರೆಗೂ ಹೋರಾಡಿ ಸೋತ ರಾಜಸ್ಥಾನ ರಾಯಲ್ಸ್  title=
Photo Courtesy: Twitter

ನವದೆಹಲಿ: ಕೊನೆಯ ಎಸೆತದವರೆಗೂ ಕೂತುಹಲ ಕೆರಳಿಸಿದ್ದ ಪಂದ್ಯದಲ್ಲಿ ಕೊನೆಗೂ ವಿಜಯಲಕ್ಷ್ಮೀ ಪಂಜಾಬ್ ಕಿಂಗ್ಸ್ ತಂಡಕ್ಕೆ ಒಲಿದಿದ್ದಾಳೆ.

ಪಂದ್ಯವನ್ನು ಏಕಾಂಗಿಯಾಗಿ ಗೆಲುವಿನ ತುದಿಗೆ ತಂದಿರಿಸಿದ್ದ ಸಂಜು ಸ್ಯಾಮ್ಸನ್ ಕೊನೆಯ ಎಸೆತದಲ್ಲಿ ಆರ್ಶ್ದೀಪ್ ಗೆ ವಿಕೆಟ್ ಒಪ್ಪಿಸುವ ಮೂಲಕ ಗೆಲುವನ್ನು ಕೈಚೆಲ್ಲಿದರು. ಕೇವಲ 63 ಎಸೆತಗಳಲ್ಲಿ 12 ಬೌಂಡರಿ ಹಾಗೂ 7 ಭರ್ಜರಿ ಸಿಕ್ಸರ್ ಗಳೊಂದಿಗೆ 119 ರನ್ ಗಳನ್ನು ಸಿಡಿಸಿ ಕೊನೆಯ ಓವರ್ ನಲ್ಲಿ ಸಿಕ್ಸರ್ ಸಿಡಿಸಲು ಹೋಗಿ ವಿಕೆಟ್ ಒಪ್ಪಿಸಿದರು.

ಇದನ್ನೂ ಓದಿ: Hyderabad vs Kolkata, 3rd Match:ರೋಚಕ ಕದನದಲ್ಲಿ ಕೊಲ್ಕತ್ತಾಗೆ 10 ರನ್ ಗಳ ಗೆಲುವು

ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿದಿದ್ದ ಪಂಜಾಬ್ ಕಿಂಗ್ಸ್ ತಂಡವು ಆರಂಭದಲ್ಲಿ ಮಾಯಾಂಕ್ ಅಗರವಾಲ್ ವಿಕೆಟ್ ಕಳೆದುಕೊಂಡರು ಸಹಿತ ಒಂದೆಡೆ ಕ್ರಿಸ್ ಗೆಲ್ ಕೇವಲ 28 ಎಸೆತಗಳಲ್ಲಿ 40 ರನ್ ಗಳ ಮೂಲಕ ಉತ್ತಮ ಅಡಿಪಾಯವನ್ನು ಹಾಕಿದರು.
ಇದಾದ ನಂತರ ಕ್ರೀಸ್ ಗೆ ಬಂದ್ ಕೆ.ಎಲ್ ರಾಹುಲ್ 50 ಎಸೆತಗಳಲ್ಲಿ 91 ರನ್ ಗಳಿಸಿದರು, ಇದರಲ್ಲಿ ಐದು ಭರ್ಜರಿ ಸಿಕ್ಸರ್ ಹಾಗೂ ಏಳು ಬೌಂಡರಿಗಳನ್ನು ಬಾರಿಸಿದರು.ಇನ್ನೊಂದೆಡೆ ದೀಪಕ್ ಹೂಡಾ ಕೇವಲ 28 ಎಸೆತಗಳಲ್ಲಿ 64 ರನ್ ಗಳಿಸಿದರು, ಇದರಲ್ಲಿ ನಾಲ್ಕು ಬೌಂಡರಿ ಹಾಗೂ ಆರು ಭರ್ಜರಿ ಸಿಕ್ಸರ್ ಗಳು ಸೇರಿದ್ದವು.

ಇದನ್ನೂ ಓದಿ: Rajasthan vs PBKS, 4th Match: ಕೆ.ಎಲ್.ರಾಹುಲ್, ಹೂಡಾ ಅಬ್ಬರ, ಪಂಜಾಬ್ 221/5

ಪಂಜಾಬ್ ಪರವಾಗಿ ಮೊಹಮ್ಮದ್ ಶಮಿ ಎರಡು ಹಾಗೂ ಆರ್ಶೀದೀಪ್ ಸಿಂಗ್ ಮೂರು ವಿಕೆಟ್ ಗಳನ್ನು ಕಬಳಿಸುವ ಮೂಲಕ ಪಂದ್ಯವನ್ನು ತಮ್ಮತ್ತ ವಾಲುವಂತೆ ಮಾಡಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News