Hombale Films : ಹೊಂಬಾಳೆ ಸಂಸ್ಥೆ ದಕ್ಷಣ ಭಾರತದ ಎಲ್ಲಾ ಭಾಷೆಗಳಲ್ಲಿ ಚಿತ್ರಗಳನ್ನು ನಿರ್ಮಾಣ ಮಾಡುತ್ತಿದೆ. ಶೀಘ್ರದಲ್ಲಿಯೇ ಬಾಲಿವುಡ್ ಸಿನಿಮಾಗಳನ್ನು ನಿರ್ದೇಶಿಸುವ ಗುರಿಯನ್ನು ಈ ಸಂಸ್ಥೆ ಹೊಂದಿದೆ. ಇದೀಗ ಇದೇ ಸಂಸ್ಥೆಯ ಮತ್ತಂದು ಸಿನಿಮಾ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಸಿನಿಮಾ ಕೆಲವೇ ದಿನಗಳಲ್ಲಿ ತೆರೆಮೇಲೆ ಬರಲಿದೆ.
Fahadh Faasil Dhoomam : ಫಹಾದ್ ಮತ್ತು ಅಪರ್ಣಾ 'ಧೂಮಂ' ಚಿತ್ರದ ಮೂಲಕ ಮತ್ತೆ ತೆರೆ ಮೇಲೆ ಮೋಡಿ ಮಾಡಲು ರೆಡಿಯಾಗಿದ್ದಾರೆ. ಥ್ರಿಲ್ಲರ್ ಕಥಾಹೊಂದಿರುವ 'ಧೂಮಂ' ಚಿತ್ರವನ್ನು ಯು-ಟರ್ನ್ ಮತ್ತು ಲೂಸಿಯಾ ಖ್ಯಾತಿ ಡೈರೆಕ್ಟರ್ ಪವನ್ ಕುಮಾರ್ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಮಲಯಾಳಂ, ತಮಿಳು, ತೆಲುಗು ಮತ್ತು ಕನ್ನಡ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
Kiccha Sudeep Next Movie : ಇದೀಗ ಕನ್ನಡ ಚಿತ್ರರಂಗದಲ್ಲಿ ಎರಡು ಹೆಚ್ಚು ಊಹಾಪೋಹದ ಸಿನಿಮಾಗಳೆಂದರೆ #Yash19 ಮತ್ತು #Kiccha46. ಇದೀಗ ಕಿಚ್ಚ ಸುದೀಪ್ ಮುಂದಿನ ಸಿನಿಮಾ ಯಾವುದು ಎಂಬ ಕುತೂಹಲ ಇನ್ನೂ ಹೆಚ್ಚಾಗಲು ಪ್ರಾರಂಭಿಸಿದೆ. ಇದಕ್ಕೆ ಕಾರಣ ಕಿಚ್ಚ ಸುದೀಪ್ ಅವರ ಟ್ವೀಟ್. ಸದ್ಯ ಸುದೀಪ್ ಟ್ವೀಟ್ ಒಂದನ್ನು ಮಾಡಿದ್ದು, ಅದರಲ್ಲಿ ತಮ್ಮ ಮುಂದಿನ ಸಿನಿಮಾ ಬಗ್ಗೆ ಬಿಗ್ ಅಪ್ಡೇಟ್ ನೀಡಿದ್ದಾರೆ. ತಮ್ಮ ಅಭಿಮಾನಿಗಳಿಗೆ ಒಂದಲ್ಲ ತ್ರಿಬಲ್ ಧಮಾಕಾ ನೀಡಿದ್ದಾರೆ.
Kantara 2 updates : ದಿ ಡಿವೈನ್ ಬ್ಲಾಕ್ಬಸ್ಟರ್ ʼಕಾಂತಾರʼ ಮೊದಲ ಭಾಗ ಬಿಡುಗಡೆಯಾಗಿ ಥಿಯೇಟರ್ಗಳಲ್ಲಿ ಆರ್ಭಟಿಸಿತ್ತು. ಇಷ್ಟು ದಿನ ಕಾಂತಾರ 2 ಸಿನಿಮಾ ಯಾವಾಗ ಬರುತ್ತೆ ಅಂತ ಕುತೂಹಲದಿಂದ ಕಾಯುತ್ತಿದ್ದ ಪ್ರೇಕ್ಷಕರಿಗೆ ಇದೀಗ ಖುಷಿ ವಿಚಾರವೊಂದಿದೆ. ಕಾಂತಾರ 2 ಸಿನಿಮಾದ ಕಥೆ ಬರೆಯಲು ರಿಷಬ್ ಶೆಟ್ಟಿ ಆಂಡ್ ಟೀಂ ಇಂದಿನಿಂದ ಶುರುಮಾಡಿದೆ.
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ ರಾಜಕುಮಾರ ಚಿತ್ರದ ನಂತರ ಹೊಂಬಾಳೆ ಫಿಲಂಸ್ ಮುಟ್ಟಿದ್ದೆಲ್ಲ ಚಿನ್ನ ಆಗ್ತಿದೆ.. ಸಾವಿರ ಕೋಟಿಯ ಕೆಜಿಎಫ್ ನಂತ್ರ ನಾನೂರು ಕೋಟಿಯ ಕಾಂತಾರ ಮಾಡಿ ಗೆದ್ದು ಬೀಗಿರುವ ಹೊಂಬಾಳೆ ಬಳಗ ಈಗ ಶೆಟ್ರು ಜೊತೆ ಕಾಂತಾರ ಪ್ರೀಕ್ವೇಲ್ ಗೆ ಫಿಕ್ಸ್ ಆಗಿದ್ದಾರೆ.
Sapthami Gowda : ಹೊಂಬಾಳೆ ಸಂಸ್ಥೆ 'ಯುವ' ಚಿತ್ರಕ್ಕೆ ಸಪ್ತಮಿ ಗೌಡ ನಾಯಕಿ ಎಂದು ಘೋಷಿಸಿದೆ. 'ಕಾಂತಾರ' ಚಿತ್ರದಲ್ಲಿ ಲೀಲಾ ಪಾತ್ರದಲ್ಲಿ ನಟಿಸಿ ಸಪ್ತಮಿ ಮೋಡಿ ಮಾಡಿದ್ದರು. ಅದರ ಬೆನ್ನಲ್ಲೇ ಅಭಿಷೇಕ್ ಅಂಬರೀಷ್ ನಟನೆಯ 'ಕಾಳಿ' ಚಿತ್ರಕ್ಕೂ ಆಯ್ಕೆ ಆಗಿದ್ದರು. ಬಾಲಿವುಡ್ ಸಿನಿಮಾದಲ್ಲಿ ನಟಿಸೋ ಅವಕಾಶ ಗಿಟ್ಟಿಸಿಕೊಂಡಿದ್ದರು. ಇದೀಗ ಬಹುನಿರೀಕ್ಷಿತ 'ಯುವ' ಚಿತ್ರಕ್ಕೆ ನಾಯಕಿಯಾಗುವ ಅವಕಾಶ ಸಿಕ್ಕಿದೆ.
ವಿಶೇಷ ಅಂದ್ರೆ ಕಳೆದ ಎರಡು ತಿಂಗಳಿನಿಂದಲೇ ರಿಷಬ್ ಟೀಮ್ ಕಥೆ ಪೋಣಿಸುವ ಕೆಲಸ ಮಾಡ್ತಿದ್ದಾರೆ. ಅದ್ರೆ ಆ ಕಥೆ ಇನ್ನು ಫೈನಲ್ ಆಗಿಲ್ಲ.ಈಗ ಈ ಕಥೆಯನ್ನು ಫೈನಲ್ ಮಾಡ್ಕೊಂಡು ಆದಷ್ಟು ಬೇಗ ಶೂಟಿಂಗ್ ಶುರು ಮಾಡಲು ತಮ್ಮ ತಂಡದ ಜೊತೆ ಸೇರಿ ಕೊಂಡಿದ್ದಾರೆ ರಿಷಬ್ ಶೆಟ್ರು....
ದೊಡ್ಮನೆ ಅಭಿಮಾನಿಗಳ ಪಾಲಿನ ಯುಗಾದಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜನ್ಮ ದಿನದಂದೆ ಸೆಟ್ಟೇರಲಿದೆ. ಈಗಾಗಲೇ ಪ್ರೀ ಪ್ರೊಡಕ್ಷನ್ ಕೆಲಸ ಮುಗಿಸಿರೋ ಸಂತೋಷ್ ಚಿತ್ರಕ್ಕೆ ಪವರ್ ಫುಲ್ ಟೈಟಲ್ ಫಿಕ್ಸ್ ಮಾಡಿಕೊಂಡಿದ್ದಾರೆ. ಜೊತೆಗೆ ನಾಯಕಿಯನ್ನು ಫಿಕ್ಸ್ ಮಾಡಿಕೊಂಡಿದ್ದಾರೆ.
Rishab Shetty about Kantara 2 : ಕಾಂತಾರ 2 ಚಿತ್ರ ತಯಾರಾಗುತ್ತಿದೆ ಎಂದು ಬಹಳ ದಿನಗಳ ಹಿಂದೆಯೇ ಹೊಂಬಾಳೆ ಫಿಲಂಸ್ನ ವಿಜಯ್ ಕಿರಗಂದೂರ್ ಖಚಿತಪಡಿಸಿದ್ದರು. ನಿರ್ದೇಶಕ ನಟ ರಿಷಬ್ ಶೆಟ್ಟಿ ಇದೇ ಮೊದಲ ಬಾರಿಗೆ ಕಾಂತಾರ 2 ಬಗ್ಗೆ ಮಾತನಾಡಿದ್ದಾರೆ.
Bagheera Movie: ಬಿಗ್ ಬಜೆಟ್ ಸಿನಿಮಾ ಬಘೀರ ಚಿತ್ರೀಕರಣದ ವೇಳೆ ನಟ ಶ್ರೀಮುರಳಿ ಕಾಲಿಗೆ ಪೆಟ್ಟಾಗಿದೆ ಎಂದು ತಿಳಿದುಬಂದಿದೆ. ತಕ್ಷಣವೇ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಸದ್ಯ ಅವರು ವಿಶ್ರಾಂತಿ ಪಡೆಯುತ್ತಿದ್ದಾರಂತೆ.
ಕನ್ನಡ ಸಿನಿಮಾಗಳಿಗೆ ದೇಶಾದ್ಯಂತ ಬಹುಬೇಡಿಕೆ ಹೆಚ್ಚಾಗಿದೆ. ಹೊರ ದೇಶಗಳಲ್ಲಿಯೂ ಸಹ ಕನ್ನಡಿಗರ ಚಿತ್ರಗಳು ಸಖತ್ ಸೌಂಡ್ ಮಾಡುತ್ತಿವೆ. ಆರ್ಆರ್ಆರ್ ನಂತರ ಇದೀಗ ಆಸ್ಕರ್ ಅಂಗಳಕ್ಕೆ ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿದ್ದ ಕಾಂತಾರ ಮತ್ತು ಅನೂಪ್ ಭಂಡಾರಿ ನಿರ್ದೇಶನ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಪಾದಾರ್ಪಣೆ ಮಾಡಿದೆ. ಆದ್ರೆ ಯಾರ ಮೂಡಿಗೆ ಪ್ರತಿಷ್ಠಿತ 95ನೇ ಆಸ್ಕರ್ ಅಕಾಡಮಿ ಪ್ರಶಸ್ತಿ ಲಭಿಸುತ್ತೆ ಅನ್ನೋದೆ ಯಕ್ಷ ಪ್ರಶ್ನೆಯಾಗಿದೆ.
Kantara in Oscars Race: ಈಗಾಗಲೇ ಆಸ್ಕರ್ ರೇಸ್ನಲ್ಲಿರುವ 301 ಸಿನಿಮಾಗಳು ಅರ್ಹತಾ ಸುತ್ತನ್ನು ಪಾಸ್ ಮಾಡಿವೆ. ಆಸ್ಕರ್ ಸದಸ್ಯರು ಮತ ಚಲಾಯಿಸಿದರೆ ‘ಕಾಂತಾರ’ ಸಿನಿಮಾ ಮುಖ್ಯ ನಾಮಿನೇಷನ್ಗೆ ಎಂಟ್ರಿ ಕೊಡಲಿದೆ.
ದಿ ಡಿವೈನ್ ಬ್ಲಾಕ್ಬಸ್ಟರ್ ಸಿನಿಮಾ ʼಕಾಂತಾರʼ ಇಂದಿಗೆ ಬರೋಬ್ಬರಿ 100 ದಿನಗಳನ್ನು ಪೂರೈಸಿದೆ. ಬಿಡುಗಡೆಯಾದ ಮೊದಲ ದಿನದಿಂದ ಅಬ್ಬರಿಸಲು ಪ್ರಾರಂಭಿಸಿದ ಕನ್ನಡಿಗನ ಸಿನಿಮಾ ದೇಶಾದ್ಯಂತ ಹಬ್ಬಿ ಚಿತ್ರಮಂದಿಗಳನ್ನು ದೇಗುಲವನ್ನಾಗಿಸಿತ್ತು. ಅಲ್ಲದೆ, ಗಡಿ ಮೀರಿ ಸಿನಿ ಪ್ರೇಮಿಗಳ ಮನಗೆದ್ದ ಚಿತ್ರಕ್ಕೆ ಭಾರತೀಯ ಸಿನಿರಂಗ ತಲೆಬಾಗಿತ್ತು. ಹಲವಾರು ದಾಖಲೆಗಳನ್ನು ಮೆಟ್ಟಿನಿಂತ ರಿಷಬ್ ಶೆಟ್ಟಿ ಸಿನಿಮಾ ಇಂದು ಶತದಿನವನ್ನು ಪೂರೈಸಿದೆ.
ಮುಂದಿನ 5 ವರ್ಷಗಳಲ್ಲಿ ಮನರಂಜನಾ ಕ್ಷೇತ್ರದಲ್ಲಿ ಸುಮಾರು ಮೂರು ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡಲು ಉದ್ದೇಶಿಸಿದ್ದೇವೆ ಎಂದು ಹೊಂಬಾಳೆ ಫಿಲಮ್ಸ್ ನ ವಿಜಯ್ ಕಿರಗಂದೂರು ಘೋಷಿಸಿದ್ದಾರೆ.ಈ ಬಗ್ಗೆ ಅವರು ತಮ್ಮ ಟ್ವೀಟರ್ ನಲ್ಲಿ ಅಧಿಕೃತವಾಗಿ ಘೋಷಿಸಿದ್ದಾರೆ.
ದಿ ಡಿವೈನ್ ಬ್ಲಾಕ್ಬಸ್ಟರ್ ಸಿನಿಮಾ ಕಾಂತಾರ ದೇಶಾದ್ಯಂತ ಸಿನಿ ರಸಿಕರಿಂದ ಅದ್ಬುತ ಪ್ರತಿಕ್ರಿಯೆ ಕನ್ನಡಿಗನ ಚಿತ್ರ. ಇತ್ತೀಚಿಗೆ ಕಾಂತಾರ ಸಿನಿಮಾದಲ್ಲಿ ತೋರಿಸಲಾದ ದೈವದ ಕುರಿತು ಅವಹೇಳನಕಾರಿ ರೀಲ್ಸ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡಲಾಗುತ್ತಿದೆ. ರಿಷಬ್ ಶೆಟ್ಟಿ ನಟನೆಯನ್ನು ಅನುಕರಣೆ ಮಾಡಿ ದೈವವನ್ನು ಅವಹೇಳನ ಮಾಡಲಾಗುತ್ತಿದೆ. ಇದೀಗ ಸಂತಾಕ್ಲಾಸ್ ವೇಷಧಾರಿ ಒಬ್ಬ ಕಾಂತಾರ ಸಿನಿಮಾದ ಕ್ಲೈಮ್ಯಾಕ್ಸ್ ಅನುಕರಣೆ ಮಾಡಿರುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಈ ವರ್ಷ ಕನ್ನಡದಿಂದ ಪ್ಯಾನ್ ಇಂಡಿಯಾ ಮಟ್ಟದಲ್ಲಿ ‘ಕೆಜಿಎಫ್ 2’ ಮತ್ತು ‘ಕಾಂತಾರ’ ಎಂಬ ಎರಡು ಬ್ಲಾಕ್ಬಸ್ಟರ್ ಚಿತ್ರಗಳನ್ನು ನೀಡಿರುವ ಹೊಂಬಾಳೆ ಫಿಲಂಸ್ ಸಂಸ್ಥೆಯು ತಮಿಳು ಚಿತ್ರರಂಗಕ್ಕೆ ಕಾಲಿಟ್ಟಿದೆ.
ಸ್ಯಾಂಡಲ್ವುಡ್ನಲ್ಲಿ ಅತ್ಯದ್ಭುತ ಸಿನಿಮಾಗಳನ್ನು ನೀಡಿ ಭಾರತೀಯ ಸಿನಿರಂಗದಲ್ಲಿ ಪ್ರಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆಯಾಗಿ ಹೊರಹೊಮ್ಮಿರುವ ಹೊಂಬಾಳೆ ಫಿಲಂಸ್ ಸದ್ಯ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟಿದ್ದು, ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಜೊತೆ ಸಿನಿಮಾ ಮಾಡಲು ಕನ್ನಡದ ಹೊಂಬಾಳೆ ಫಿಲಂಸ್ ಮುಂದಾಗಿದೆ.
ಕೆಜಿಎಫ್ ಭಾರತೀಯ ಚಿತ್ರರಂಗವೇ ಕನ್ನಡ ಚಿತ್ರರಂಗ ದತ್ತ ತಿರುಗಿ ನೋಡುವಂತೆ ಮಾಡಿತ್ತು.. ಕೆಜಿಎಫ್ ಗೆಲುವು ಚಿತ್ರರಂಗಕ್ಕೆ ಹೊಸ ಹಾದಿ ಬುನಾದಿ ಹಾಕಿ ಕೊಟ್ಟಿತ್ತು.. ಆದರು ಕೆಜಿಎಫ್ ಗೆಲುವು ಆಕಸ್ಮಿಕ ಅಂದ ಮಂದಿಯೇ ಜಾಸ್ತಿ.. ಅದರೆ ಕೆಜಿಎಫ್ ನಂತರ ಬಂದ ಮತ್ತೊಂದಷ್ಟು ಕನ್ನಡ ಚಿತ್ರಗಳು ಕಾಲ್ ಎಳೆಯೋ ಮಂದಿಗೆ ಗೋಲಿ ಹೊಡೆದು ಬಾಕ್ಸ್ ಆಫೀಸ್ ನ ಚಿಂದಿ ಚಿತ್ರಾನ್ನ ಮಾಡಿದ್ವು.. ಅದರಲ್ಲೂ ರಿಷಬ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿರುವ ಕಾಂತಾರ ಚಿತ್ರ ಕನ್ನಡ ಸಿನಿಮಾಗಳಂದ್ರೆ ಅಸಡ್ಡೆಯಿಂದ ಮಾತಾಡೋ ಮಂದಿ ತಲೆತಿರುಗುವಂತೆ ಮಾಡಿದ್ದು, ಇಂದಿಗೂ ಕನ್ನಡದ ಕಾಂತಾರ ಅರ್ಭಟ ಕಮ್ಮಿ ಆಗಿಯೇ ಇಲ್ಲ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.