ಇಡ್ಲಿ ವಿಚಾರಕ್ಕೆ ಗುಂಪುಗಳ ನಡುವೆ ಗ್ಯಾಂಗ್ವಾರ್: ದಾಳಿಗೆ ಕಾರು ಜಖಂ!

ಈಶಾನ್ಯ ವಿಭಾಗಕ್ಕೆ ಡಿಸಿಪಿಯಾಗಿ ಖಡಕ್ ಅಧಿಕಾರಿ ಅನೂಪ್ ಶೆಟ್ಟಿ ಬಂದ ಮೇಲೂ ದೇವನಹಳ್ಳಿಯಲ್ಲಿ ಗಾಂಜಾ ಕಿರಿಕ್‍ಗಳು ನಿಂತಿಲ್ಲ.

Written by - Zee Kannada News Desk | Last Updated : Sep 20, 2022, 04:46 PM IST
  • ಇಡ್ಲಿ ವಿಚಾರಕ್ಕೆ ಕಳೆದ ರಾತ್ರಿ ಎರಡು‌ ಗುಂಪುಗಳ ನಡುವೆ ಘರ್ಷಣೆ
  • ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯಲ್ಲಿ ನಡೆದಿರುವ ಘಟನೆ
  • ಈಶಾನ್ಯ ವಿಭಾಗಕ್ಕೆ ಡಿಸಿಪಿಯಾಗಿ ಅನೂಪ್ ಶೆಟ್ಟಿ ಬಂದ ಮೇಲೂ ನಿಲ್ಲದ ಪುಡಿರೌಡಿಗಳ ಕಿರಿಕ್
ಇಡ್ಲಿ ವಿಚಾರಕ್ಕೆ ಗುಂಪುಗಳ ನಡುವೆ ಗ್ಯಾಂಗ್ವಾರ್: ದಾಳಿಗೆ ಕಾರು ಜಖಂ! title=
ಇಡ್ಲಿ ವಿಚಾರಕ್ಕೆ ಗುಂಪುಗಳ ನಡುವೆ ಗ್ಯಾಂಗ್ವಾರ್!

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯಲ್ಲಿ ಕಳೆದ ರಾತ್ರಿ ಇಡ್ಲಿ ವಿಚಾರಕ್ಕೆ ಎರಡು‌ ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ನನಗೆ ಇಡ್ಲಿ ಬೇಗ ಕೊಡಬೇಕೆಂದು ದೇವನಹಳ್ಳಿ ಪುರಸಭೆ ಮುಂಭಾಗ ಗ್ಯಾಂಗ್ ವಾರ್ ನಡೆದಿದೆ. ದಿನೇಶ್ ಮತ್ತು ತನಜೀಂ ಎಂಬುವರ ಎರಡು ಗುಂಪಿನ ನಡುವೆ ಗಲಾಟೆ ನಡೆದಿದೆ. ಗಲಾಟೆಯಲ್ಲಿ ತನಜೀಂಗೆ ಸೇರಿದ ಕಾರು ಜಖಂ ಆಗಿದೆ.

ಇದನ್ನೂ ಓದಿ: Crime News: ಕೇವಲ 9 ಸಾವಿರ ರೂ. ಸಾಲಕ್ಕೆ ಚಾಕುವಿನಿಂದ ಇರಿದು ಹತ್ಯೆ..!

ತನಜೀಂ ಚಾಕುವಿನಿಂದ ಇರಿದ ಎಂಬ ಕಾರಣಕ್ಕೆ ಕಾರು ಜಖಂ ಮಾಡಿದ ಆರೋಪ ಕೇಳಿಬಂದಿದೆ. ದಾಳಿಯಿಂದ ಕಾರಿನ ಗ್ಲಾಸ್‍ಗಳೆಲ್ಲಾ ಪುಡಿ ಪುಡಿಯಾಗಿವೆ.

ಇದನ್ನೂ ಓದಿ: ಸಿಐಡಿ ಚಾರ್ಜ್ ಶೀಟ್ ಸಲ್ಲಿಸಿದ ಬಳಿಕ PSI ಮರುಪರೀಕ್ಷೆ ದಿನಾಂಕ ಪ್ರಕಟ: ಡಿಜಿ ಪ್ರವೀಣ್ ಸೂದ್

ಇತ್ತೀಚೆಗೆ ದೇವನಹಳ್ಳಿಯಲ್ಲಿ ಗಲಾಟೆ ಪ್ರಕರಣಗಳು ಹೆಚ್ಚಾಗುತ್ತಿವೆ. ಈಶಾನ್ಯ ವಿಭಾಗಕ್ಕೆ ಡಿಸಿಪಿಯಾಗಿ ಖಡಕ್ ಅಧಿಕಾರಿ ಅನೂಪ್ ಶೆಟ್ಟಿ ಬಂದ ಮೇಲೂ ದೇವನಹಳ್ಳಿಯಲ್ಲಿ ಗಾಂಜಾ ಕಿರಿಕ್‍ಗಳು ನಿಂತಿಲ್ಲ. ಗಾಂಜಾ ಮತ್ತಿನಲ್ಲಿ ಸಣ್ಣ ಪುಟ್ಟ ವಿಚಾರಕ್ಕೂ ಪುಡಿ ರೌಡಿಗಳ ಗಲಾಟೆಗಳು ಹೆಚ್ಚಾಗುತ್ತಿವೆ. ಆದಷ್ಟು ಬೇಗ ಇದಕ್ಕೆ ಕಡಿವಾಣ ಹಾಕಬೇಕೆಂಬ ಆಗ್ರಹಗಳು ಕೇಳಿಬಂದಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News