ಪ್ರೀತಿಗೆ ವಯಸ್ಸಿನ ಬಂದ ಇಲ್ಲ ಎನ್ನುವ ಮಾತನ್ನು ನಾವು ಕೇಳಿರುತ್ತೇವೆ, ಈಗ ಇದು ನಿಜ ಎನ್ನುವಂತೆ ಚಿಕ್ಕಬಳ್ಳಾಪುರದಲ್ಲಿ 30 ರ ಯುವತಿಯನ್ನು 65 ರ ವಯಸ್ಸಿನ ವ್ಯಕ್ತಿಯೊಬ್ಬನು ಮದುವೆಯಾಗಿದ್ದಾನೆ.
Tomato Price in Karnataka: ದೇಶದಲ್ಲಿ ಟೊಮೇಟೊ ದರ ದಿನೇ ದಿನೇ ಕುಸಿತ ಕಾಣುತ್ತಿದೆ. ರಾಜ್ಯದ ಕೆಲವು ಎಪಿಎಂಸಿಯಲ್ಲಿ ಟೊಮೇಟೊ ದರ ಕೆಜಿಗೆ 14 ರೂ.ನಂತೆ ಮಾರಾಟವಾಗುತ್ತಿದೆ. ಅನೇಕ ಸ್ಥಳಗಳಲ್ಲಿ 20 ರೂ. ಇದೆ. ಬೆಂಗಳೂರಿನಲ್ಲಿ ಟೊಮೇಟೊ 30-35 ರೂ. ನಂತೆ ಮಾರಾಟವಾಗುತ್ತಿದೆ.
Chikkaballapur Suicide Drama: ಕೆರೆಯ ದಡದಲ್ಲಿ ಇಬ್ಬರ ಚಪ್ಪಲಿ, ಬ್ಯಾಗ್, ಬಟ್ಟೆ, ಮೊಬೈಲ್ ಫೋನ್ ಇಟ್ಟು ಇಬ್ಬರು ಆತ್ಮಹತ್ಯೆಯ ಡ್ರಾಮಾ ಮಾಡಿದ್ದಾರೆ. ಅಗ್ನಿಶಾಮಕ ದಳ, ಪೊಲೀಸರು ಮತ್ತು ಸ್ಥಳೀಯರು ತುಂಬಿದ ಕೆರೆಯಲ್ಲಿ ದಿನವಿಡೀ ಶವ ಶೋಧ ನಡೆಸಿ ಕೊನೆಗೆ ಬರಿಗೈಲಿ ವಾಪಸಾಗಿದ್ದರು.
Dr K Sudhakar VS Pradeep Eshwar: ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ನಾವು ಯಾವುದೇ ರೀತಿಯ ಸೇಡಿನ ರಾಜಕಾರಣ ಮಾಡಿಲ್ಲ, ಇದೀಗ ಈಗ ನಿಮ್ಮ ಕೈಯಲ್ಲಿ ಕೀ ಇದೆ, ಬೀಗ ಇದೆ. ನಾವೇನು ನಿಮ್ಮನ್ನು ತಡೆ ಹಿಡಿದಿಲ್ಲ. ಅದೇನು ಮಾಡುತ್ತೀರೋ ಮಾಡಿ ಅಂತಾ ಕಾಂಗ್ರೆಸ್ ನಾಯಕರಿಗೆ ಸುಧಾಕರ್ ಸವಾಲು ಹಾಕಿದ್ದಾರೆ.
ಬೆಳ್ಳಂಬೆಳಗ್ಗೆನೇ ಚಿಕ್ಕಬಳ್ಳಾಪುರ ನಗರ ರೌಂಡ್ಸ್ ಹಾಕುತ್ತಿರುವ ಶಾಸಕ ಪ್ರದೀಪ್ ಈಶ್ವರ್ .
ಬೀದಿ ಬದಿ ವ್ಯಾಪಾರಿಗಳ ಬಳಿ ತೆರಳಿ ಸಮಸ್ಯೆಗಳನ್ನು ಆಲಿಸುತ್ತಿರುವ ಪ್ರದೀಪ್ ಈಶ್ವರ್ .
ನಮಸ್ತೆ ಚಿಕ್ಕಬಳ್ಳಾಪುರ ಹೆಸರಿನಲ್ಲಿ ಮುಂದುವರಿದ ಅಭಿಯಾನ..
ಬೆಳಗ್ಗೆ 6.30 ಕ್ಕೆ ಆಗಮಿಸಿ ಜನಸಾಮಾನ್ಯರ ಸಮಸ್ಯೆಗಳಿಗೆ ನೈಜ ದರ್ಶನ.
ಪ್ರದೀಪ್ ಈಶ್ವರ್ ಚಿಕ್ಕಬಳ್ಳಾಪುರ ವಿದಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ .
ಚಿಕ್ಕಬಳ್ಳಾಪುರದ ಜಿಲ್ಲೆಯಲ್ಲಿ ಸುರಿದ ಮಳೆಯ ಭೂಮಿಯ ತೇವಾಂಶಕ್ಕೆ ಹೂ ಹೊಳಪು ಕಳೆದುಕೊಂಡಿದ್ರೆ, ಅತ್ತ ಜಿಲ್ಲೆಯಲ್ಲಿ ಹೂ ಇಳುವರಿ ದುಪ್ಟಟ್ಟಾಗಿದೆ.. ಹೊರ ರಾಜ್ಯ ಹಾಗು ಹೊರ ದೇಶಗಳಿಗೆ ರಪ್ತಾಗುತ್ತಿದ್ದ ಹೂಗಳನ್ನು ಮಾರುಕಟ್ಟೆಯಲ್ಲಿ ಕೇಳೋರೆ ಇಲ್ಲದೆ ತಾನು ತಂದ ಹೂಗಳನ್ನು ತಿಪ್ಪೆಗೆ ಸುರಿದು ಬರಿಗೈಯಲ್ಲಿ ಮನೆಕಡೆ ನಡೆಯುವಂತಾಗಿದೆ..
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಪ್ರದೀಪ್ ಈಶ್ವರ್ ತಮ್ಮ ಹುಟ್ಟೂರು ಪೆರೇಸಂದ್ರ ಮತ್ತು ಸುತ್ತಮುತ್ತ ಗ್ರಾಮಗಳಲ್ಲಿ ಮತಯಾಚನೆ ಮಾಡಿದರು. ಅಪ್ಪ ಅಮ್ಮಂದಿರ ಸಮಾನರಾದವರ ಕಾಲಿಗೆ ಎರಗಿ ಆಶೀರ್ವಾದ ಪಡೆದರು. ಗ್ರಾಮಗಳಿಗೆ ಪ್ರವೇಶ ನೀಡುತಿದ್ದಂತೆ ಮನೆ ಮಂದಿಯೆಲ್ಲಾ ಹಾರ ಹಿಡಿದು ಆರತಿ ಮಾಡಿ ಸ್ವಾಗತಿಸಿದರು. ಕೆಲ ಹಿರಿಯರಂತೂ ಪ್ರದೀಪ್ ಊರಿಗೆ ಬಂದಾಕ್ಷಣ ಮನೆಗೆ ಮಗ ಬಂದಂತೆ ಭಾವಿಸಿ ಗಲ್ಲ ಹಿಡಿದು ಮಾತನಾಡಿಸಿದರು.
ಚಿಕ್ಕಬಳ್ಳಾಪುರದ ಕಾಂಗ್ರೆಸ್ ಅಭ್ಯರ್ಥಿ ಪ್ರದೀಪ್ ಈಶ್ವರ್ ಚುನಾವಣಾ ಪ್ರಚಾರದ ವೇಳೆ ಹಲವು ಗ್ರಾಮಗಳಿಗೆ ಭೇಟಿ ಕೊಟ್ಟಿದ್ದು, ತಾಲೂಕಿನ ದೊಡ್ಡಕಿರುಗಂಬಿ ಗ್ರಾಮದ ದಲಿತರೊಬ್ಬರ ಗುಡಿಸಿಲಿನಲ್ಲಿ ಊಟ ಮಾಡಿ ತಮ್ಮ ಸರಳತೆ ಮೆರೆದಿದ್ದಾರೆ. ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಯಾಗಿರೋ ಪ್ರದೀಪ್ ಈಶ್ವರ್, ತಾಲೂಕಿನಾದ್ಯಂತ ಬಿರುಸಿನ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದು, ದಿನೇ ದಿನೆ ತಮ್ಮ ವರ್ಚಸ್ಸು ಬೆಳೆಸಿಕೊಂಡು ಆರೋಗ್ಯ ಸಚಿವರಿಗೆ ಸೆಡ್ಡು ಹೊಡೆಯಲು ಸಾಕಷ್ಟು ತಯಾರಿ ನಡೆಸಿಕೊಂಡು ಬಂದಿದ್ದಾರೆ. ಇನ್ನು ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ಜನತೆ ಬಿಜೆಪಿ ಪಕ್ಷವನ್ನು ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದು, ಗೆಲುವಿನ ಮೆಟ್ಟಿಲಿಗೆ ಬಹಳಷ್ಟು ಹತ್ತಿರದಲ್ಲಿದ್ದಾರೆ ಪ್ರದೀಪ್ ಈಶ್ವರ್.
ರಾಜ್ಯ ಪರಿಸರ ಬಜೆಟ್ ಮತ್ತು ಚಿಕ್ಕಬಳ್ಳಾಪುರದಲ್ಲಿ ಈಶ ಫೌಂಡೇಶನ್ ನ ಜಮೀನಿಗೆ ಸಂಬಂಧಿಸಿದ ವಿಷಯಗಳಲ್ಲಿ ಹರಡುತ್ತಿರುವ ಕೆಲವು ಸುಳ್ಳು ಮಾಹಿತಿಗಳಿಂದ ನಮಗೆ ತೀವ್ರ ನೋವಾಗಿದೆ. ನಮ್ಮ ಮೇಲೆ ಮಾಡಲಾದ ಆರೋಪಗಳು ಮತ್ತು ತಪ್ಪು ಮಾಹಿತಿಗಳು ಸಂಪೂರ್ಣವಾಗಿ ಆಧಾರರಹಿತ ಮತ್ತು ವಾಸ್ತವಿಕವಾಗಿ ಅಸತ್ಯವಾಗಿವೆ ಎಂದು ಫೌಂಡೇಶನ್ ಸ್ಪಷ್ಟಪಡಿಸಿದೆ.
ಚಿಕ್ಕಬಳ್ಳಾಪುರದ ಸುಧಾಕರ್ಗೆ ರಾಜಕೀಯ ಜನ್ಮ ಕೊಟ್ಟಿದ್ದು ಕಾಂಗ್ರೆಸ್.. ಸುಧಾಕರ್ ಡಾಕ್ಟರ್ ಓದಿದ್ದಾನಾ.. ಕಾಪಿ ಮಾಡಿದ್ದಾನೋ ಗೊತ್ತಿಲ್ಲ ಎಂದು ಚಿಕ್ಕಬಳ್ಳಾಪುರ ಪ್ರಜಾಧ್ವನಿ ಸಮಾವೇಶದಲ್ಲಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಕರ್ನಾಟಕದಲ್ಲಿ ಭ್ರಷ್ಟ ಮಂತ್ರಿ ಅಂತ ಇದ್ರೆ ಅದು ಸುಧಾಕರ್ ಮಾತ್ರ ಎಂದಿದ್ದಾರೆ.
Newborn Found In Circle: ಸರ್ಕಲ್ನಲ್ಲಿ ನವಜಾತ ಹೆಣ್ಣು ಶಿಶುವನ್ನು ಕಂಡ ಪೌರ ಕಾರ್ಮಿಕರು ಹಾಗೂ ಸಾರ್ವಜನಿಕರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
Ramya In Chikkaballapur Utsav : ಇಷ್ಟು ವರ್ಷ ಕಾಂಗ್ರೆಸ್ ಪಕ್ಷದಲ್ಲಿದ್ದ ರಮ್ಯಾ ಇದೀಗ ಬಿಜೆಪಿ ಸೇರ್ಪಡೆಯಾಗುತ್ತಾರಾ ಎಂಬ ಅನುಮಾನಗಳು ಕಾಡಲು ಆರಂಭಿಸಿವೆ. ಅದಕ್ಕೆ ಕಾರಣ ಚಿಕ್ಕಬಳ್ಳಾಪುರ ಉತ್ಸವದಲ್ಲಿ ರಮ್ಯಾ ಆಡಿದ ಮಾತುಗಳು.
ದೇಶದಲ್ಲಿ ಬಿಜೆಪಿ ಪಕ್ಷ ದುರಾಡಳಿತ ನಡೆಸುತ್ತಿದೆ ಎಂದು ಆರೋಪಿಸಿ ಜೆಡಿಎಸ್ ಕಾರ್ಯಕರ್ತರು ಮಾಜಿ ಶಾಸಕ ಕೆ ಪಿ ಬಚ್ಚೇಗೌಡ ನೇತೃತ್ವದಲ್ಲಿ ಚಿಕ್ಕಬಳ್ಳಾಪುರ ನಗರದ ಬಿಬಿ ರಸ್ತೆಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ ನಂದಿನಿ ಸಂಸ್ಥೆಯನ್ನು ಗುಜರಾತ್ನ ಅಮೂಲ್ ಸಂಸ್ಥೆ ಜೊತೆ ವೀಲೀನಗೊಳಿಸುವ ಹುನ್ನಾರ ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿದ್ರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.