ಕಾಂಗ್ರೆಸ್-ಎನ್ಸಿಪಿ-ಶಿವಸೇನೆ ಮೈತ್ರಿ ಮಾಜಿ ಕಿಸಾನ್ ವಿಂಗ್ ನಾಯಕ ನಾನಾ ಪಟೋಲೆ ಅವರನ್ನು ಮಹಾರಾಷ್ಟ್ರ ವಿಧಾನಸಭಾ ಸ್ಪೀಕರ್ ಹುದ್ದೆಗೆ ತನ್ನ ಅಭ್ಯರ್ಥಿಯಾಗಿ ಘೋಷಿಸಿವೆ. ಈ ಪ್ರಯತ್ನವನ್ನು ಪಶ್ಚಿಮ ಮಹಾರಾಷ್ಟ್ರದ ಕೃಷಿ ಸಮುದಾಯಗಳ ಓಲೈಕೆಗಾಗಿ ಮಾಡಿರುವ ಯೋಜನೆ ಎಂದು ಹೇಳಲಾಗುತ್ತಿದೆ.
ಉದ್ಧವ್ ಸರ್ಕಾರದ ಬಹುಮತ ಸಾಬೀತು, ಹೊಸ ಸ್ಪೀಕರ್ ಆಯ್ಕೆ, ವಿರೋಧ ಪಕ್ಷದ ಮುಖಂಡರ ಘೋಷಣೆ ಮತ್ತು ರಾಜ್ಯಪಾಲರ ಭಾಷಣಕ್ಕಾಗಿ ವಿಧಾನಸಭೆಯ ಎರಡು ದಿನಗಳ ವಿಶೇಷ ಅಧಿವೇಶನವನ್ನು ಕರೆಯಲಾಗಿದೆ.
ಶನಿವಾರ ಮಧ್ಯಾಹ್ನ 2 ಗಂಟೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸರ್ಕಾರ ತನ್ನ ಬಹುಮತವನ್ನು ಸಾಬೀತುಪಡಿಸುತ್ತದೆ. ಹೊಸ ಸ್ಪೀಕರ್ ಆಯ್ಕೆ, ವಿರೋಧ ಪಕ್ಷದ ಮುಖಂಡರ ಘೋಷಣೆ ಮತ್ತು ರಾಜ್ಯಪಾಲರ ಭಾಷಣಕ್ಕಾಗಿ ಮಹಾರಾಷ್ಟ್ರ ವಿಧಾನಸಭೆಯ ಎರಡು ದಿನಗಳ ವಿಶೇಷ ಸಭೆ ಕರೆಯಲಾಗಿದೆ.
ಪ್ರಜಾಪ್ರಭುತ್ವದಲ್ಲಿ ರಾಜಕೀಯ ಪಕ್ಷಗಳ ನಡುವಿನ ಮೈತ್ರಿಗಳಿಗೆ ನಿರ್ಬಂಧಗಳಿಲ್ಲ, ಮಹಾರಾಷ್ಟ್ರದಲ್ಲಿ ಶಿವಸೇನೆ, ಎನ್ಸಿಪಿ ಮತ್ತು ಕಾಂಗ್ರೆಸ್ ನಡುವಿನ ಮತದಾನದ ನಂತರದ ಮೈತ್ರಿಯನ್ನು ಪ್ರಶ್ನಿಸಿದ ಹಿಂದೂ ಮಹಾಸಭಾ ಮುಖಂಡರ ಮನವಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಮಹಾರಾಷ್ಟ್ರದ ನಂತರ ಗೋವಾದಲ್ಲಿ ಪವಾಡ ಕಾಣಲಿದೆ ಎಂದು ಶಿವಸೇನೆ ಮುಖಂಡ ಸಂಜಯ್ ರೌತ್ ಶುಕ್ರವಾರ ಘೋಷಿಸಿದರು, ಅವರ ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷ (ಎನ್ಸಿಪಿ) ಮತ್ತು ಕಾಂಗ್ರೆಸ್ ಜೊತೆ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾದ ನಂತರ ಅವರು ಈ ಹೇಳಿಕೆ ನೀಡಿದ್ದಾರೆ.
ಮಹಾರಾಷ್ಟದಲ್ಲಿ ಹಲವು ರಾಜಕೀಯ ಬೆಳವಣಿಗೆ ನಂತರ ಬಿಜೆಪಿ ಜೊತೆ ಸೇರಿ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಅಜಿತ್ ಪವಾರ್ ಸೂಕ್ತ ಸಂಖ್ಯಾಬಲದ ಕೊರತೆಯಿಂದಾಗಿ 78 ಗಂಟೆಗಳ ನಂತರ ತಮ್ಮ ಹುದ್ದೆಗೆ ರಾಜಿನಾಮೆ ನೀಡಿದ್ದರು. ಈಗ ಉದ್ಧವ್ ಠಾಕ್ರೆ ನೇತೃತ್ವದ ನೂತನ ಸರ್ಕಾರದಲ್ಲಿಯೂ ಅಜಿತ್ ಪವಾರ್ ಉಪ ಮುಖ್ಯಮಂತ್ರಿಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಹಿರಿಯ ಶಿವಸೇನೆ ಮುಖಂಡ ಸಂಜಯ್ ರೌತ್ ಕಳೆದ ವಾರಗಳಿಂದ ತಮ್ಮ ಹರಿತವಾದ ಟ್ವೀಟ್ ಗಳಿಂದ ಗಮನಸೆಳೆಯುತ್ತಿದ್ದಾರೆ. ಈಗ ತಮ್ಮ ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಕೆಲವೇ ಗಂಟೆಗಳ ಮೊದಲು ಅವರು ಮಾಡಿರುವ ಟ್ವೀಟ್ ಈಗ ಗಮನ ಸೆಳೆದಿದೆ.
ಆದಿತ್ಯ ಠಾಕ್ರೆ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಮಾಜಿ ಪ್ರಧಾನಿ ಹಾಗೂ ಖ್ಯಾತ ಅರ್ಥಶಾಸ್ತ್ರಜ್ಞ ಮನಮೋಹನ್ ಸಿಂಗ್ ಇಬ್ಬರನ್ನೂ ಭೇಟಿಯಾಗಿ, ಅವರ ತಂದೆ ಉದ್ಧವ್ ಠಾಕ್ರೆ ಅವರು ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡುವ ಸಮಾರಂಭದಲ್ಲಿ ಭಾಗವಹಿಸಲು ಆಹ್ವಾನಿಸಿದರು.
ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಉದ್ಧವ್ ಠಾಕ್ರೆ ಪ್ರಮಾಣ ವಚನ ಸ್ವೀಕರಿಸುವ ಒಂದು ದಿನ ಮುಂಚಿತವಾಗಿ ಕಾಂಗ್ರೆಸ್ 13 ಖಾತೆಗಳಿಗೆ ಒಪ್ಪಿಕೊಂಡಿದೆ. ಅದರಲ್ಲಿ 9 ಕ್ಯಾಬಿನೆಟ್ ಖಾತೆ ಹಾಗೂ 4 ರಾಜ್ಯ ಖಾತೆ ಎಂದು ವರದಿಯಾಗಿದೆ.
ಹಲವು ವಾರಗಳ ಕಾಲ ನಡೆದ ಮಹಾರಾಷ್ಟ್ರ ನಾಟಕೀಯ ಬೆಳವಣಿಗೆ ಕೊನೆಗೂ ಅಂತ್ಯವಾಗಿದೆ. ಈ ಹಿನ್ನಲೆಯಲ್ಲಿ ಈಗ ಶಿವಸೇನಾ ವಕ್ತಾರ ಸಂಜಯ್ ರೌತ್ ಶಿವಸೇನಾ ಸೂರ್ಯಯಾನ ದೆಹಲಿಗೂ ತಲುಪಿದರೂ ಅಚ್ಚರಿ ಪಡಬೇಕಾಗಿಲ್ಲ ಎಂದು ಹೇಳಿದ್ದಾರೆ.
ಮಹಾರಾಷ್ಟ್ರದ ರಾಜಕೀಯವನ್ನು ಅರ್ಥಮಾಡಿಕೊಳ್ಳುವವರು ಈ ಸರ್ಕಾರದ ಕಿಂಗ್ ಮೇಕರ್ ಶರದ್ ಪವಾರ್ ಅವರ ಇಚ್ಛೆಯಿಲ್ಲದೆ ಮಹಾರಾಷ್ಟ್ರದ ಹೊಸ ಸರ್ಕಾರದಲ್ಲಿ ಏನೂ ಆಗುವುದಿಲ್ಲ ಎಂದು ನಂಬುತ್ತಾರೆ, ಏಕೆಂದರೆ ಶರದ್ ಪವಾರ್ ಈ ಸರ್ಕಾರದ ಅಡಿಪಾಯ ಎಂದು ನಂಬಲಾಗಿದೆ.
ಮಂಗಳವಾರ ತಡರಾತ್ರಿ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯರಿ ಅವರನ್ನು ಭೇಟಿಯಾದ ನಂತರ ಆದಿತ್ಯ ಠಾಕ್ರೆ, "ಮಹಾ ವಿಕಾಸ್ ಅಗಾಡಿ ಅವರು ಉದ್ಧವ್ ಠಾಕ್ರೆ ಸಾಹೇಬರನ್ನು ತಮ್ಮ ನಾಯಕರಾಗಿ ಆಯ್ಕೆ ಮಾಡಿದ್ದಾರೆ. ರಾಜ್ಯಪಾಲರು ಇಂದು ನಮಗೆ ಸಮಯವನ್ನು ನೀಡಿದರು ಮತ್ತು ಸರ್ಕಾರ ರಚಿಸುವ ಅವಕಾಶವನ್ನು ನಾವು ಬಯಸುತ್ತೇವೆ. ಜನರಿಗೆ ಮತ್ತು ರಾಜ್ಯಕ್ಕೆ ಸ್ಥಿರವಾದ ಸರ್ಕಾರವನ್ನು ಒದಗಿಸಿ ನಾವು ಜನಪರ ಕೆಲಸ ಮಾಡಲು ಬಯಸುತ್ತೇವೆ" ಎಂದರು.
ಮಹಾರಾಷ್ಟ್ರದಲ್ಲಿನ ದೇವೇಂದ್ರ ಫಡ್ನವೀಸ್ ಸರ್ಕಾರಕ್ಕೆ ಸುಪ್ರೀಂಕೋರ್ಟ್ ವಿಶ್ವಾಸ ಮತವನ್ನು ಬುಧುವಾರ ಸಾಯಂಕಾಲ ಸಾಬೀತುಪಡಿಸಬೇಕು ಎಂದು ಹೇಳಿದ ಬೆನ್ನಲ್ಲೇ ಸಿಎಂ ಹುದ್ದೆಯಿಂದ ದೇವೇಂದ್ರ ಫಡ್ನವೀಸ್ ಕೆಳಗಿಳಿದಿದ್ದಾರೆ.ಎನ್ಸಿಪಿ ನಾಯಕ ಅಜಿತ್ ಪವಾರ್ ತಮ್ಮ ಡಿಸಿಎಂ ಸ್ಥಾನದಿಂದ ಹೊರಬಂದ ಕೆಲವೇ ದಿನಗಳಲ್ಲಿ ಫಡ್ನವೀಸ್ ರಾಜೀನಾಮೆ ನೀಡಿದರು.
ಹಿಂದೊಮ್ಮೆ ಹಿರಿಯ ಪತ್ರಕರ್ತ ವೀರ್ ಸಂಘ್ವಿ ಶಿವಸೇನೆಯ ಬಾಳಾಸಾಹೇಬ್ ಠಾಕ್ರೆ ಅವರನ್ನು ಉಲ್ಲೇಖಿಸುತ್ತಾ ಮುಂಬಯಿಯಲ್ಲೋಬ್ಬ ಸೂಪರ್ ಸ್ಟಾರ್ ಇದ್ದಾನೆ ಎಂದು ಹೇಳಿದ್ದರು. ಆದರೆ ಈಗ ಪ್ರಸಕ್ತ ರಾಜಕೀಯದಲ್ಲಿ ಶರದ್ ಪವಾರ್ ಭಾರತೀಯ ರಾಜಕಾರಣದ ನೂತನ ಸೂಪರ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.