ಸ್ಯಾಂಡಲ್ವುಡ್ ನಟ ದರ್ಶನ್ ಅವರ ಮೇಲೆ ನಡೆದ ಅಮಾನವೀಯ ಘಟನೆ ಚಂದನವದ ಕಲಾದರ ಮನಸ್ಸಿಗೆ ನೋವುಂಟು ಮಾಡಿದೆ. ಮೊನ್ನೆ ಸುದೀಪ್ ಅವರು ದರ್ಶನ ಅವರ ಪರ ನಿಂತು ಅಭಿಮಾನಿಗಳಿಗೆ ಬುದ್ದಿಮಾತು ಹೇಳುವ ಕೆಲಸ ಮಾಡಿದ್ದರು. ಇದೀಗ ದೊಡ್ಮನೆ ಕುಡಿ ನಟ ಯುವ ರಾಜಕುಮಾರ ಅವರು ಹೊಸಪೇಟೆಯಲ್ಲಿ ನಡೆದ ಘಟನೆ ಕುರಿತು ಮೌನ ಮುರಿದಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನಗೆ ಹೊಸಪೇಟೆಯಲ್ಲಿ ನಡೆದ ಘಟನೆಯ ಬಗ್ಗೆ ಕಿಚ್ಚ ಸುದೀಪ್ ಸುದೀರ್ಘ ಪತ್ರ ಬರೆದು ಖಂಡಿಸಿದ್ದರು. ಈಗ ಈ ಬಗ್ಗೆ ದರ್ಶನ ಪ್ರತಿಕ್ರಿಯಿಸಿದ್ದು, ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸುದೀಪ್ ಗೆ ಟ್ಯಾಗ್ ಮಾಡಿ, ಕಿಚ್ಚ ಸುದೀಪ್ ನಿಮ್ಮ ಪ್ರೀತಿಯ ಸಾಲುಗಳಿಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.
Ramya on Fans War: ಈ ಘಟನೆ ಕುರಿತು ಚಂದನವನದ ಎಲ್ಲ ನಟ ಹಾಗೂ ನಟಿಯರೂ ಪ್ರತಿಕ್ರಿಯಿಸುತ್ತಿದ್ದಾರೆ. ದರ್ಶನ್ ಬೆಂಬಲಕ್ಕೆ ಸ್ಯಾಂಡಲ್ವುಡ್ ತಾರಾ ಬಳಗ ನಿಂತಿದ್ದಾರೆ. ಇದೀಗ ಈ ಬಗ್ಗೆ ಮೋಹಕ ತಾರೆ ರಮ್ಯಾ ಕೂಡ ಮಾತನಾಡಿದ್ದಾರೆ.
Kiccha Sudeep : ಸ್ಯಾಂಡಲ್ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮೇಲೆ ಚಪ್ಪಲಿ ಎಸೆದ ಘಟನೆಗೆ ಕನ್ನಡ ಸಿನಿರಂಗ ಬೇಸರಗೊಂಡಿದೆ. ಕಲಾವಿದರಿಗೆ ಪ್ರೀತಿ, ಗೌರವ ನೀಡಿ ಅಷ್ಟು ಸಾಕು ಎಂದು ನಟ, ನಟಿಯರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಈ ಕುರಿತು ಧ್ವನಿ ಎತ್ತಿದ್ದು, ಕರುನಾಡಿನ ನೆಲ, ಭಾಷೆ, ಸಂಸ್ಕೃತಿಗೆ ಇಂತಹ ಘಟನೆಗಳು ಕಪ್ಪು ಚುಕ್ಕೆ ಅಂತ ಬೇಸರ ವ್ಯಕ್ತಪಡಿಸಿದ್ದಾರೆ.
ಹಿರಿಯ ನಟಿ ಸುಮಲತಾ ಅಂಬರೀಶ್ ಕೂಡ ಡಿ ಬಾಸ್ ದರ್ಶನ್ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ‘ದರ್ಶನ್ ಮೇಲೆ ನಡೆದಿರುವ ಹಲ್ಲೆ ಯಾವುದೇ ನಿಜವಾದ ಅಭಿಮಾನಿ ಮಾಡದ ಕೃತ್ಯ. ಇದರಿಂದ ದರ್ಶನ್ ವರ್ಚಸ್ಸು, ಖ್ಯಾತಿಗೆ ಯಾವುದೇ ಕುತ್ತು ತರಲು ಸಾಧ್ಯವಿಲ್ಲ’ವೆಂದು ಹೇಳಿದ್ದಾರೆ.
ವೀರ ಕನ್ನಡಿಗ, ಶಾಂತಿಯ ಪ್ರತೀಕ, ಅಜಾತಶತ್ರು, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಒಳ್ಳೆಯತನಕ್ಕೆ ಹಿಡಿದ ಕೈಗನ್ನಡಿಯಾಗಿದ್ದರು. ಇಂದಿಗೂ ರಾಜವಂಶದ ಕುಡಿ ಕನ್ನಡಿಗರ ಹೃದಯದಲ್ಲಿ ಅಜರಾಮರ. ಅಪ್ಪು ತಮ್ಮ ಅಭಿಮಾನಿಗಳಿಗೆ ಸದಾ ಖುಷ್ ಖುಷಿಯಾಗಿ ಯಾರಿಗೂ ನೋವುಂಟು ಮಾಡದಂತೆ ಇರಲು ಹೇಳುತ್ತಿದ್ರು. ಆದ್ರೆ ಇದೀಗ ಅಂತಹ ಯುವರತ್ನನ ಅಭಿಮಾನಿಗಳು ದರ್ಶನ್ ಅವರ ಮೇಲೆ ಚಪ್ಪಲಿ ಎಸೆದು ಅವಮಾನ ಮಾಡುವ ಮಟ್ಟಕ್ಕೆ ಇಳಿದ್ರಾ ಎನ್ನುವ ಅನುಮಾನ ಕಾಡುತ್ತಿದೆ.
ShivaRajkumar on slipper hurled at Darshan : ರಾಜ್ ಕುಟುಂಬದ ಅಭಿಮಾನಿಗಳು ಈ ರೀತಿ ಮಾಡಲ್ಲ, ಯಾರೋ ಕಿಡಿಗೇಡಿಗಳು ಈ ಕೆಲಸ ಮಾಡಿದ್ದಾರೆ ಎಂದು ಶಿವರಾಜ್ಕುಮಾರ್, ರಾಘಣ್ಣ ಮತ್ತು ಅಪ್ಪು ಫ್ಯಾನ್ಸ್ ವಾದಿಸುತ್ತಿದ್ದಾರೆ. ಈ ಕುರಿತಾಗಿ ಶಿವರಾಜ್ಕುಮಾರ್ ಅವರ ಬಳಿ ಕೆಲ ಅಭಿಮಾನಿಗಳು ದಯವಿಟ್ಟು ಇದರ ಕುರಿತು ಮಾತನಾಡಿ ಎಂದು ಮನವಿ ಮಾಡಿದ್ದರು. ಈ ಬೆನ್ನಲ್ಲೇ ಶಿವರಾಜ್ಕುಮಾರ್ ಪ್ರತಿಕ್ರಿಯಿಸಿದ್ದಾರೆ.
Darshan : ಕ್ರಾಂತಿ ಚಿತ್ರದ ಎರಡನೇ ಸಾಂಗ್ ಬೊಂಬೆ ಬೊಂಬೆ ಹಾಡು ರಿಲೀಸ್ ಕಾರ್ಯಕ್ರಮ ಸರಾಗವಾಗಿ ಆರಂಭವಾಯಿತು. ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ ಎನ್ನುವ ಬೆನ್ನಲ್ಲೇ ಕಿಡಿಗೇಡಿಯೊಬ್ಬ ವೇದಿಕೆ ಮೇಲಿದ್ದ ನಟ ದರ್ಶನ್ ಅವರ ಮೇಲೆ ಚಪ್ಪಲಿ ಬಿಸಾಡಿದ್ದಾನೆ. ಈ ಘಟನೆ ಡಿ ಬಾಸ್ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ.
ಸ್ಯಾಂಡಲ್ವುಡ್ನ ಬಾಕ್ಸ್ ಆಫೀಸ್ ಸುಲ್ತಾನ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮೇಲೆ ಕಿಡಿಗೇಡಿಯೊಬ್ಬರು ಚಪ್ಪಲಿ ಎಸೆದ ಘಟನೆಗೆ ಕನ್ನಡ ನಟ, ನಟಿಯರು ಭಾರಿ ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ. ಇದೀಗ ಡಿಬಾಸ್ ಬೆಂಬಲಿಸಿ ಜಪ್ಪಲಿ ಎಸೆದವರ ವಿರುದ್ಧ ಗುಡುಗಿರುವ ನಟಿ ನಿಶ್ವಿಕಾ ನಾಯ್ಡು ಈ ರೀತಿಯಾಗಿ ದರ್ಶನ್ ಅವರು ಕುಗ್ಗಿಸಲು ಸಾಧ್ಯವಿಲ್ಲ, ಇಂತಹ ನೂರಾರು ಕಷ್ಟಗಳ ನಡುವೆ ಅವರು ಬೆಳೆದು ಬಂದಿದ್ದಾರೆ ಎಂದು ಹೇಳಿದ್ದಾರೆ.
ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮೇಲೆ ಕಿಡಿಗೇಡಿಯೊಬ್ಬರು ಚಪ್ಪಲಿ ಎಸೆದ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ನಡೆದಿದೆ. ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಲ್ಲದೆ, ಇದೇ ಸಮಯವನ್ನು ದುರುದ್ದೇಶಕ್ಕಾಗಿ ಬಳಸಿಕೊಳ್ಳುತ್ತಿರುವ ಕಿಡಿಗೇಡಿಗಳು ಖ್ಯಾತ ನಿರ್ದೇಶಕ ತರುಣ್ ಸುಧೀರ್ ಹೆಸರಲ್ಲಿ ದರ್ಶನ್ ವಿರುದ್ಧ ಟ್ಟೀಟ್ ಮಾಡಿದ್ದಾರೆ.
ಸ್ಯಾಂಡಲ್ವುಡ್ ಚಾಲೆಂಜಿಂಗ್ ಸ್ಟಾರ್ ನಟ, ದರ್ಶನ್ ಮೇಲೆ ಕಿಡಿಗೇಡಿಯೊಬ್ಬರು ಚಪ್ಪಲಿ ಎಸೆದಿದ್ದಾನೆ. ಈ ಕುರಿತ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಲ್ಲದೆ, ದಚ್ಚು ಅಭಿಮಾನಿಗಳ ಮನಸ್ಸಿಗೆ ಈ ಘಟನೆ ತುಂಬಾ ನೋವುಂಟು ಮಾಡಿದ್ದು, ಈ ರೀತಿ ಒಬ್ಬ ನಟನಿಗೆ ಅವಮಾನ ಮಾಡುವುದು ಸರಿಯಲ್ಲ ಅಂತ ಅಸಮಾಧಾನ ಹೊರಹಾಕಿದ್ದಾರೆ.
Darshan Interview : ದರ್ಶನ್ ಅಭಿನಯದ ಕ್ರಾಂತಿ ಸಿನಿಮಾ ಬಿಡುಗಡೆಗೆ ಎಲ್ಲರೂ ಕಾದು ಕುಳಿತಿದ್ದಾರೆ. ಈ ಮಧ್ಯೆ ಸಿನಿಮಾದ ಪ್ರಮೋಷನ್ನಲ್ಲಿ ದರ್ಶನ್ ಬ್ಯುಸಿಯಾಗಿದ್ದಾರೆ. ಚಿತ್ರದ ಪ್ರಚಾರದ ವೇಳೆ ಮೊದಲ ಬಾರಿಗೆ ದರ್ಶನ್ ಬಾಯಿಯಲ್ಲಿ ಸುದೀಪ್ ಹೆಸರು ಕೇಳಿಬಂದಿದೆ.
ಪುನೀತ್ ರಾಜ್ಕುಮಾರ್ ಹಾಗೂ ನಟ ದರ್ಶನ್ ಒಟ್ಟಿಗೆ ಇರುವ ಫೋಟೋ ನೋಡಲು ಸಿಗುವುದು ಬಲು ಅಪರೂಪ. ಇದು ಅಷ್ಟಾಗಿ ವೈರಲ್ ಆಗದ ಕಾರಣ ಅನೇಕರು ಇಬ್ಬರೂ ಬಾಲ್ಯದ ಒಟ್ಟಾಗಿರುವುದನ್ನು ನೋಡಿಲ್ಲ. ಚಿತ್ರರಂಗದ ಎಲ್ಲರ ಜೊತೆಯೂ ಆತ್ಮೀಯ ಸ್ನೇಹ ಹೊಂದಿದ್ದರು ಪುನೀತ್. 80ರ ದಶಕದಲ್ಲಿ ತೆಗೆದ ಅಪ್ಪು ಮತ್ತು ದರ್ಶನ್ ಅವರ ಬಾಲ್ಯದ ಫೋಟೋ ಎಲ್ಲೆಡೆ ಇದೀಗ ಎಲ್ಲರ ಗಮನ ಸೆಳೆದಿದೆ.
ಇದರಲ್ಲಿ ಪ್ರಮುಖವಾಗಿ ಅಭಿಮಾನಿಗಳ ಬಗ್ಗೆ ದಾಸ ದರ್ಶನ್ ಮಾತನಾಡಿರೋ ಮಾತುಗಳು ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ. “ಅಭಿಮಾನಿಗಳು ನನಗೆ ಇಷ್ಟೆಲ್ಲಾ ಪ್ರೀತಿ ತೋರಿಸುತ್ತಾರೆ. ನಾನು ಅವರ ಋಣವನ್ನ ಹೇಗೆ ತೀರಿಸಲಿ..? ಈ ಜನ್ಮದಲ್ಲಿ ತೀರಿಸಲು ಸಾಧ್ಯವೇ ಇಲ್ಲ ಬಿಡಿ” ಅನ್ನೋದನ್ನ ತುಂಬಾ ಭಾವುಕರಾಗಿ ಹೇಳಿದ್ರು ದರ್ಶನ್.
ʻಕ್ರಾಂತಿʼಯಲ್ಲಿ ರವಿಚಂದ್ರನ್ ಸೇರಿದಂತೆ ಎಲ್ಲರದ್ದೂ ಮುಖ್ಯ ಪಾತ್ರ ಎಂದು ಡಿ ಬಾಸ್ ದರ್ಶನ್ ಹೇಳಿದ್ದಾರೆ.. ಸಿನಿಮಾಗಾಗಿ ನಾನು ಜಗಳ ಮಾಡಿದ್ದೀನಿ ಅಂತಾ ದರ್ಶನ್ ಹೇಳಿಕೊಂಡಿದ್ದಾರೆ.. ಜೀ ಕನ್ನಡ ನ್ಯೂಸ್ಗೆ ದರ್ಶನ್ ನೀಡಿದ ವಿಶೇಷ ಸಂದರ್ಶನ ಇಲ್ಲಿದೆ..
ʻಕ್ರಾಂತಿʼ ಶೂಟಿಂಗ್ ಆಗಿದ್ದು ಎಲ್ಲೆಲ್ಲಿ..? ಕ್ರಾಂತಿ ಸಿನಿಮಾದ ಪ್ರಚಾರದ ಬಗ್ಗೆ ದರ್ಶನ್ ಹೇಳಿದ್ದೇನು..? ಜೀ ಕನ್ನಡ ನ್ಯೂಸ್ಗೆ ನೀಡಿದ ಸಂದರ್ಶನದಲ್ಲಿ ದರ್ಶನ್ ಕ್ರಾಂತಿ ಸಿನಿಮಾದ ಬಗ್ಗೆ ಹಲವು ಮಾಹಿತಿ ನೀಡಿದ್ದಾರೆ..
ಜಾಲಿ ಮಾಡಲು ನಾನು ಸೆಟ್ಗೆ ಹೋಗಲ್ಲ. ಸಿನಿಮಾ ನನಗೆ ಹೊಟ್ಟೆಪಾಡು ಎಂದು ಡಿ ಬಾಸ್ ಹೇಳಿದ್ದಾರೆ. ಜೀ ಕನ್ನಡ ನ್ಯೂಸ್ಗೆ ದರ್ಶನ್ ನೀಡಿದ ವಿಶೇಷ ಸಂದರ್ಶನದಲ್ಲಿ ಸಿನಿಮಾಗೆ ಸಂಬಂಧಿಸಿದಂತೆ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.
ಇಂದು ರಾಜಕೀಯ ಅಂದ್ರೆ ಬ್ಯುಸಿನೆಸ್.. ಹಣ ಕೊಡದೇ ಇದ್ರೆ ಇವತ್ತು ವೋಟು ಹಾಕಲ್ಲ ಎಂದು ದರ್ಶನ್ ಹೇಳಿದ್ದಾರೆ. ಜೀ ಕನ್ನಡ ನ್ಯೂಸ್ಗೆ ದರ್ಶನ್ ನೀಡಿದ ವಿಶೇಷ ಸಂದರ್ಶನದಲ್ಲಿ ರಾಜಕೀಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.