ಇಂಟರ್ನೆಟ್ ಮೇಲೆ ಇಂದು ಹಲವು ಸೋರ್ಸ್ ಪಾಸ್ವರ್ಡ್ ಹ್ಯಾಕಿಂಗ್ ಸಾಫ್ಟ್ವೇರ್ ಗಳಿದ್ದು, ಇವುಗಳಿಂದ ಸುಲಭವಾಗಿ ಯಾವುದೇ ವ್ಯಕ್ತಿಯ ಪಾಸ್ವರ್ಡ್ ಗಳನ್ನು ಹ್ಯಾಕ್ ಮಾಡಬಹುದಾಗಿದೆ. ಆದರೆ ನೀವು ಇದಕ್ಕೆ ಬಲಿಯಾಗುವುದರಿಂದ ಪಾರಾಗಬಹುದು.
ದೇಶಾದ್ಯಂತ ಮುಂದುವರೆದಿರುವ ಲಾಕ್ ಡೌನ್ ಹಾಗೂ ಅನ್ ಲಾಕ್ ನಡುವೆಯೇ ಸೈಬರ್ ವಂಚನೆಯ ಪ್ರಕರಣಗಳ ಸಂಖ್ಯೆಯಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿವೆ. ಹೀಗಾಗಿ ಸದ್ಯ ವಾಟ್ಸ್ ಆಪ್ ಮೂಲಕ ಎಸಗಲಾಗುತ್ತಿರುವ ವಂಚನೆಯ ಕುರಿತು ದೆಹಲಿ ಪೊಲೀಸರು ಅಲರ್ಟ್ ಜಾರಿಗೊಳಿಸಿದ್ದಾರೆ.
ಆನ್ಲೈನ್ ಗುಪ್ತಚರ ಸಂಸ್ಥೆಯೊಂದು ಪ್ರಮುಖ ಸೈಬರ್ ಅಪರಾಧ ಎಸಗಿದೆ ಎಂದು ದೃಢಪಡಿಸಿದೆ ಮತ್ತು 2.9 ಕೋಟಿ ಭಾರತೀಯರ ವೈಯಕ್ತಿಕ ಡೇಟಾವನ್ನು ಡಾರ್ಕ್ ವೆಬ್ನಲ್ಲಿ ಆನ್ಲೈನ್ನಲ್ಲಿ ಉಚಿತವಾಗಿ ಸೋರಿಕೆ ಮಾಡಲಾಗಿದೆ.
ದೇಶಾದ್ಯಂತ ಹೆಚ್ಚುತ್ತಿರುವ ಎಟಿಎಂ ವಂಚನೆಗೆ ಸಂಬಂಧಿಸಿದಂತೆ ಬ್ಯಾಂಕ್ ಕಾಲಕಾಲಕ್ಕೆ ತನ್ನ ಗ್ರಾಹಕರಿಗೆ ಎಚ್ಚರಿಕೆಗಳನ್ನು ನೀಡುತ್ತಲೇ ಇರುತ್ತದೆ. ಇಂತಹುದರಲ್ಲಿ ನಿಮ್ಮ ಡೆಬಿಟ್-ಕ್ರೆಡಿಟ್ ಕಾರ್ಡ್ ಅನೇಕ ಬಾರಿ ನಿಮ್ಮ ಬಳಿಯೇ ಇದ್ದರೂ ಕೂಡ ನಿಮ್ಮ ಖಾತೆಯಿಂದ ಹಣ ಖಾಲಿಯಾಗುತ್ತದೆ. ಇತ್ತೀಚಿಗೆ ದೇಶಾದ್ಯಂತ ಇಂತಹ ಫ್ರಾಡ್ ಗಳು ಹೆಚ್ಚುತ್ತಲೇ ಇವೆ. ಹಾಗಾದರೆ ಬನ್ನಿ ಈ ರೀತಿಯ ಫ್ರಾಡ್ ಗಳು ಹೇಗೆ ನಡೆಯುತ್ತವೆ ಎಂಬುದನ್ನು ತಿಳಿದುಕೊಳ್ಳೋಣ.
ಕೇಂದ್ರೀಯ ತನಿಖಾ ಸಂಸ್ಥೆ (CBI) ದೇಶದ ಎಲ್ಲ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳು ಹಾಗೂ ಕೇಂದ್ರೀಯ ಸಂಸ್ಥೆಗಳಿಗೆ ಎಚ್ಚರಿಕೆಯ ಸಂದೇಶವೊಂದನ್ನು ರವಾನಿಸಿದೆ. ಹೌದು, ಕೊರೊನಾ ಅಪ್ಡೇಟ್ ತಿಳಿಯಲು ಡೌನ್ ಲೋಡ್ ಮಾಡಲಾಗುತ್ತಿರುವ ಮೊಬೈಲ್ ಅಪ್ಲಿಕೇಶನ್ ಗಳ ಕುರಿತು ಈ ಎಚ್ಚರಿಕೆಯ ಸಂದೇಶ ರವಾನಿಸಿದೆ.
ಕೊರೊನಾ ವೈರಸ್ ನಿಂದ ಘೋಷಿಸಲಾಗಿರುವ ಲಾಕ್ ಡೌನ್ ಹಿನ್ನೆಲೆ ಬಹುತೇಕ ಜನರು ತಮ್ಮ ಮನೆಯಿಂದಲೇ ಕಚೇರಿಯ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ. ಇಂತಹುದರಲ್ಲಿ ಕಂಪನಿಗಳಿಂದ ನೌಕರರಿಗೆ ಬರುತ್ತಿರುವ ಇ-ಮೇಲ್ ಗಳ ಸಂಖ್ಯೆಯಲ್ಲಿಯೂ ಕೂಡ ವ್ಯಾಪಕ ವೃದ್ಧಿಯಾಗಿದೆ.
ದೇಶಾದ್ಯಂತ ಲಾಕ್ ಡೌನ್ ಘೋಸಿಸಲಾಗಿರುವ ಹಿನ್ನೆಲೆ ಸ್ಮಾರ್ಟ್ ಫೋನ್ ಬಳಕೆಯಲ್ಲಿ ಹೆಚ್ಚಳವಾಗಿದೆ. ಏಕೆಂದರೆ ಬಹುತೇಕ ಜನರು ತಮ್ಮ ಬಹುತೇಕ ಕೆಲಸಗಳನ್ನು ತಮ್ಮ ಮೊಬೈಲ್ ನಲ್ಲಿಯೇ ಮಾಡಲು ಇಷ್ಟಪಡುತ್ತಿದ್ದಾರೆ. ಆದರೆ, ಇಂತಹ ಪರಿಸ್ಥಿತಿಯಲ್ಲಿ ಹ್ಯಾಕರ್ ಗಳೂ ಕೂಡ ತುಂಬಾ ಸಕ್ರೀಯವಾಗಿದ್ದಾರೆ. ಎಲ್ಲ ಕೆಲಸಗಳಿಗೆ ಬೇಕಾಗುವ ದಾಖಲೆಗಳು ಸೇರಿದಂತೆ ಹಣಕಾಸಿನ ಎಲ್ಲ ವ್ಯವಹಾರಗಳು ಫೋನ್ ಮೂಲಕವೇ ನಡೆಯುತ್ತಿದೆ.
ಕೊರೊನಾ ಲಾಕ್ ಡೌನ್ ಹಿನ್ನೆಲೆ ಎಲ್ಲ ಜನರು ತಮ್ಮ ಮನೆಗಳಲಿಯೇ ಬಂಧಿಯಾಗಿದ್ದು, ತಮ್ಮ ಅನುಕೂಲಕ್ಕಾಗಿ ಆನ್ಲೈನ್ ಸೇವೆಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಆದರೆ, ಇದೆ ಅವಧಿಯಲ್ಲಿ ಸೈಬರ್ ಕ್ರೈಂ ಘಟನೆಗಳೂ ಕೂಡ ಹೆಚ್ಚಾಗುತ್ತಿವೆ. ಇಂತಹುದರಲ್ಲಿ ಜನರ ಒಂದು ತಪ್ಪು ಭಾರಿ ಹಾನಿಗೆ ಎಡೆಮಾಡಿಕೊಡಲಿದೆ.
ಫೇಕ್ ಆಂಟಿವೈರಸ್ ನಿಂದ ನಿಮ್ಮ ಕಂಪ್ಯೂಟರ್ ಗೆ ಹಾನಿಯಾಗುವ ಸಾಧ್ಯತೆ ಹೆಚ್ಚಾಗಿದೆ. ಹ್ಯಾಕರ್ ಗಳು ಈ ರೀತಿಯ ಫೇಕ್ ಆಂಟಿ ವೈರಸ್ ಬಳಸಿ ನಿಮ್ಮ ವೈಯಕ್ತಿಕ ಮಾಹಿತಿಗೆ ಕನ್ನ ಹಾಕುವ ಸಾಧ್ಯತೆ ಇದೆ.
ಸಾಮಾಜಿಕ ಅಂತರ (Social Distancing)ವನ್ನು ಗಮನದಲ್ಲಿಟ್ಟುಕೊಂಡು, ಬಹುತೇಕ ಜನರು ತಮ್ಮ ಮನೆಯಿಂದ ಆನ್ಲೈನ್ ಮಾಧ್ಯಮಗಳ ಮೂಲಕ ಕೆಲಸ ಮಾಡುತ್ತಿದ್ದಾರೆ. ಈ ಅವಕಾಶದ ಲಾಭವನ್ನು ಪಡೆದುಕೊಳ್ಳಲು ಸೈಬರ್ ಕ್ರಿಮಿನಲ್ ಸಹ ಬಹಳ ಸಕ್ರೀಯರಾಗಿದ್ದಾರೆ. ಜನರಿಗೆ ವಂಚನೆ ಎಸಗಲು ಆನ್ಲೈನ್ ನಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರಯತ್ನಿಸಲಾಗುತ್ತಿದೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಗೃಹ ಸಚಿವಾಲಯ ಸೈಬರ್ ವನ್ಚಕರಿಗೆ ಕಡಿವಾಣ ಹಾಕಲು ಹೊಸ ವ್ಯವಸ್ಥೆಯೊಂದನ್ನು ಜಾರಿಗೆ ತಂದಿದೆ.
ಕರೋನಾ ವೈರಸ್ ಹೆಸರಿನಲ್ಲಿ ಮೋಸ ಮಾಡಲು ಸಂಚು ರೂಪಿಸುತ್ತಿರುವವರ ಬಗ್ಗೆ ದೆಹಲಿ ಪೊಲೀಸರು ಸಲಹೆ ನೀಡಿದ್ದಾರೆ. ಈ ಸಾಂಕ್ರಾಮಿಕದ ಹೆಸರಿನಲ್ಲಿ ಅಪರಾಧಿಗಳು ಜನರನ್ನು ಮೋಸ ಮಾಡಬಹುದು ಎಂದು ಪೊಲೀಸರು ಹೇಳುತ್ತಾರೆ.
ಭಾರತ ಸೇರಿದಂತೆ ವಿಶ್ವದಾದ್ಯಂತ ಬೆಳೆಯುತ್ತಿರುವ ಕೊರೊನಾವೈರಸ್(Coronavirus) ಜೊತೆಗೆ ಸೈಬರ್ ಅಪರಾಧಿಗಳು ಸಕ್ರಿಯರಾಗಿದ್ದಾರೆ, ಅವರು ಇಮೇಲ್, ಎಸ್ಎಂಎಸ್ ಅಥವಾ ನಕಲಿ ವೆಬ್ಸೈಟ್ ಮೂಲಕ ನಿಮ್ಮನ್ನು ಮೋಸ ಮಾಡಬಹುದು.
ಒಂದು ವೇಳೆ ನೀವು ನಿಮ್ಮ ಡೆಬಿಟ್ ಕಾರ್ಡ್ ಹಾಗೂ ಕ್ರೆಡಿಟ್ ಕಾರ್ಡ್ ನಿಂದ ಒಂದು ಬಾರಿಯೂ ಕೂಡ ಆನ್ಲೈನ್ ವ್ಯವಹಾರ ನಡೆಸಿಲ್ಲ ಎಂದಾದಲ್ಲಿ ಈ ಸುದ್ದಿ ನಿಮಗೆ ತಿಳಿಯುವುದು ಅವಶ್ಯಕವಾಗಿದೆ.
IRCTC ALERT: ತನ್ನ ಯಾತ್ರಿಗಳಿಗೆ ವಿಶೇಷ ಅಲರ್ಟ್ ಜಾರಿಗೊಳಿಸಿರುವ IRCTC ತಮ್ಮ ಸಾಮಾಜಿಕ ಮಾಧ್ಯಮಗಳ ಪ್ಲಾಟ್ಫಾರ್ಮ್ ಗಳ ಮೇಲೆ PNR ಸ್ಟೇಟಸ್, ಟ್ರಾನ್ಸ್ಯಾಕ್ಶನ್ ಐಡಿ ಹಾಗೂ ಇತರೆ ಯಾವುದೇ ಮಾಹಿತಿ ಹಂಚಿಕೊಳ್ಳದಂತೆ ಸೂಚಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.