ಲಾಕ್ ಡೌನ್ ನಡುವೆಯೇ ಎದ್ದಿರುವ ದೊಡ್ಡ ಸವಾಲು ಯಾವುದೆಂದರೆ ಲಾಕ್ ಡೌನ್ ಬಳಿಕ ಲೋನ್ ಮೊರಟೋರಿಯಂ ಘೋಷಣೆ ಮಾಡುತ್ತಾ ಸರ್ಕಾರ ಅನ್ನೋದು. ಕಳೆದ ವರ್ಷ ಲಾಕ್ ಡೌನ್ ಮಾಡಿದಾಗ ಸರ್ಕಾರ ಮತ್ತು ಆರ್ ಬಿಐ 6 ತಿಂಗಳ ಲೋನ್ ಮೊರೊಟೋರಿಯಂ ಘೋಷಣೆ ಮಾಡಿತ್ತು.
Corona Impact: ಕರೋನಾದ ಎರಡನೇ ಅಲೆ 5 ಲಕ್ಷ ಕೋಟಿ ರೂ.ಗಳ ವಾಣಿಜ್ಯ ನಷ್ಟಕ್ಕೆ ಕಾರಣವಾಗಿದೆ, ಇದರಲ್ಲಿ ಪ್ರಾಣ (Covid-19 Cases In India) ಮತ್ತು ಆಸ್ತಿಪಾಸ್ತಿ ನಷ್ಟವಾಗಿದೆ. ಕೇವಲ ರಾಷ್ಟ್ರ ರಾಜಧಾನಿ ದೆಹಲಿ 25 ಸಾವಿರ ಕೋಟಿ ರೂ. ವಾಣಿಜ್ಯ ನಷ್ಟ ಅನುಭವಿಸಿದೆ.
Inflation Rate - ದೇಶಾದ್ಯಂತ ಕೊರೊನಾ ವೈರಸ್ ನ ಎರಡನೇ ಅಲೆ (Coronavirus Second Wave) ನಿಲ್ಲುವ ಲಕ್ಷಣಗಳೇ ಗೋಚರಿಸುತ್ತಿಲ್ಲ. ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ನಿರಂತರ ಏರಿಕೆ ಹಾಗೂ ಲಾಕ್ ಡೌನ್ (Lockdown) ಹಿನ್ನೆಲೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಎಚ್ಚರಿಕೆಯ ಸಂದೇಶವೊಂದನ್ನು ರವಾನಿಸಿದೆ.
ಲಾಕ್ ಡೌನ್ ಘೋಷಣೆಯಾಗುತ್ತಿದ್ದಂತೆ ಜನರಲ್ಲಿ ಆತಂಕ ಆವರಿಸಿದೆ. ಉದ್ಯೋಗ ಅರಸಿಕೊಂಡು ಬೆಂಗಳೂರಿಗೆ ಧಾವಿಸಿದ್ದ ಜನರು ಈಗ ಬೆಂಗಳೂರು ಸಹವಾಸ ಬೇಡಪ್ಪಾ ಎಂದು ತಮ್ಮ ಊರಿಗೆ ದೌಡಾಯಿಸುತ್ತಿದ್ದಾರೆ. ಸಿಕ್ಕ ಸಿಕ್ಕ ಬಸ್ಸು ವಾಹನ ಹತ್ತಿ ಪರಿವಾರ ಸಹಿತ ಊರಿಗೆ ಧಾವಿಸುತ್ತಿದ್ದಾರೆ.
ಬೆಂಗಳೂರಿನ ಪಿಹೆಚ್ಎಎಫ್ಐ ಲೈಫ್ ಕೇರ್ ಮತ್ತು ಎಪಿಡೊಮಲೋಜಿ ತಜ್ಞ ಡಾ. ಗಿರಿಧರ ಬಾಬು ಪ್ರಕಾರ, ಕರೋನಾ (Coronavirus) ರಕ್ಕಸನನ್ನು ನಿಯಂತ್ರಿಸಲು ಫುಲ್ ಲಾಕ್ ಡೌನ್ ಏಕಮಾತ್ರ ಆಯ್ಕೆ ಅಲ್ಲ.
ಲಾಕ್ ಡೌನ್ ಮತ್ತು ನಿರುದ್ಯೋಗ ಸಮಸ್ಯೆಯಿಂದ ಸಾಕಷ್ಟು ಜನರು ಊರಿಗೆ ಮುಖ ಮಾಡುತ್ತಿದ್ದಾರೆ. ಇದೇ ವೇಳೆ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ 330 ಹೆಚ್ಚುವರಿ ರೈಲುಗಳನ್ನು ಓಡಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ.
ಲಾಕ್ಡೌನ್ ಸಮಯದಲ್ಲಿ ಜನರಿಗೆ ಸಹಾಯ ಮಾಡಲು ಮೊಬೈಲ್ ಎಟಿಎಂ ವ್ಯಾನ್ ಅನ್ನು ಚಲಾಯಿಸಲು ಎಚ್ಡಿಎಫ್ಸಿ ಬ್ಯಾಂಕ್ ನಿರ್ಧರಿಸಿದೆ. ಇದರಿಂದಾಗಿ ಕಂಟೈನ್ಮೆಂಟ್ ವಲಯದಲ್ಲೂ ಜನರಿಗೆ ಹಣಕ್ಕಾಗಿ ಯಾವುದೇ ಸಮಸ್ಯೆ ಎದುರಾಗುವುದಿಲ್ಲ.
ಲಾಕ್ ಡೌನ್ ಕಾಲದಲ್ಲಿ ಮನೆಯೊಳಗಿದ್ದರೂ, ದಿನಕ್ಕೊಮ್ಮೆಯಾದರೂ ಹೊರಗೆ ಹೋಗಲೇ ಬೇಕಾದ ಸನ್ನಿವೇಶ ಬರಬಹುದು. ಡೆಲಿವರಿ ಹುಡುಗ ನಿಮ್ಮ ಮನೆಗೆ ಬರಬಹುದು. ರೇಷನ್, ಹಾಲು, ಹಣ್ಣು, ತರಕಾರಿ ಮನೆಯೊಳಗೆ ಬಂದೇ ಬರುತ್ತೆ.
ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಕಳೆದ ಒಂದೇ ದಿನ 2767 ಜನರನ್ನು ಕರೋನಾ ಬಲಿ ಪಡೆದುಕೊಂಡಿದೆ. ಇದು ಭಾರತದ ಮಟ್ಟಿಗೆ ಒಂದೇ ದಿನದಲ್ಲಿ ದಾಖಲಾದ ಅತಿ ಹೆಚ್ಚು ಸಂಖೆಯ ಮರಣ ಪ್ರಮಾಣವಾಗಿದೆ.
ಮಂಗಳವಾರ ಮುಖ್ಯಮಂತ್ರಿ ಉದ್ದವ್ ಠಾಕ್ರೆಯನ್ನು ಭೇಟಿಯಾದ ಆರೋಗ್ಯ ಸಚಿವ ರಾಜೇಶ್ ಟೋಪೆ, ರಾಜ್ಯಾದ್ಯಂತ ಬುಧವಾರ ರಾತ್ರಿ 8 ಗಂಟೆಯಿಂದ ಸಂಪೂರ್ಣ ಲಾಕ್ ಡೌನ್ ಜಾರಿಗೊಳಿಸುವಂತೆ ಮನವಿ ಮಾಡಿದ್ದಾರೆ.
Delhi Govt Financial Assistance: ದೆಹಲಿ ಸರ್ಕಾರದ ವತಿಯಿಂದ ಅಫಿಡವಿಟ್ ಪ್ರಕಾರ ನೋಂದಾಯಿತ ನಿರ್ಮಾಣ ಕಾರ್ಮಿಕರಿಗೆ 5000 ರೂ.ಗಳ ಆರ್ಥಿಕ ನೆರವು ನೀಡಲಾಗುವುದು. ಅದೇ ಸಮಯದಲ್ಲಿ, ವಲಸೆ ಕಾರ್ಮಿಕರನ್ನು ಗುರುತಿಸಲು ಮತ್ತು ಸಹಾಯ ಮಾಡಲು ಸಮಿತಿಯನ್ನು ರಚಿಸಲಾಗುವುದು ಎಂದು ತಿಳಿದುಬಂದಿದೆ.
Delhi Lockdown: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನಾ (Covid-19) ಸೋಂಕು ವಿಪರೀತಕ್ಕೆ ತಲುಪಿದ ಬಳಿಕ ದೆಹಲಿಯ ಸರ್ಕಾರ ಇಂದು ರಾತ್ರಿಯಿಂದ ಬರುವ ಸೋಮಾವಾರ ಬೆಳಗಿನವರೆಗೆ ಲಾಕ್ ಡೌನ್ ಘೋಷಿಸಿದೆ.
ಮಹಾರಾಷ್ಟ್ರದಲ್ಲಿ ವಾರಾಂತ್ಯದ ಲಾಕ್ಡೌನ್ ಹೊರತಾಗಿಯೂ, ಒಂದೇ ದಿನದಲ್ಲಿ 68 ಸಾವಿರಕ್ಕೂ ಹೆಚ್ಚು ಹೊಸ ಕರೋನಾ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಒಂದೇ ದಿನದಲ್ಲಿ 503 ಕರೋನಾ ರೋಗಿಗಳು ಸಾವನ್ನಪ್ಪಿರುವುದು ಎಲ್ಲರ ಆತಂಕವನ್ನು ಹೆಚ್ಚಿಸಿದೆ.
Maharashtra Coronavirus Update - ಮಹಾರಾಷ್ಟ್ರ (Maharashtra)ದಲ್ಲಿ ಇಂದು ಕೊರೊನಾ ವೈರಸ್ ನ ದಾಖಲೆಯ 63, 729 ಹೊಸ ಪ್ರಕರಣಗಳು ವರದಿಯಾಗಿವೆ. ಇನ್ನೊಂದೆಡೆ ಕಳೆದ 24 ಗಂಟೆಗಳಲ್ಲಿ ಸುಮಾರು 400 ಜನರು ಈ ಮಾರಕ ವೈರಸ್ ದಾಳಿಗೆ ತುತ್ತಾಗಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.